ಕೆಎಸ್ಸಾರ್ಟಿಸಿ ಬಸ್ಸುಗಳ ನಡುವೆ ಅಪಘಾತ: ಓರ್ವ ಮೃತ್ಯು

Update: 2022-12-12 04:25 GMT

ಬಳ್ಳಾರಿ, ಡಿ.12: ಕರ್ನಾಟಕ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶ ಗಡಿಭಾಗದ ಹೀರೆಹಾಳ್ ಗ್ರಾಮದ ಬಳಿ ಸೋಮವಾರ ಬೆಳಗ್ಗಿನ ಜಾವ ವರದಿಯಾಗಿದೆ. 

ರಸ್ತೆ ಉಬ್ಬಿನಲ್ಲಿ ಮುಂದಿನ ಬಸ್ಸು ನಿಧಾನಿಸಿದಾಗ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಢಿಕ್ಕಿಯಾಗಿದ್ದು, ಮುಂದಿನ ಬಸ್ಸಿನ ಜತೆಗೆ  ರಸ್ತೆ ವಿಭಜಕಕ್ಕೆ ಕೂಡ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ನಾಲ್ಕೈದು ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗಾಯಾಳುಗಳ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ‌

ಇದನ್ನೂ ಓದಿ: ಮಂಡ್ಯ: ಭೀಕರ ಅಪಘಾತದಲ್ಲಿ ಐವರು ಮೃತ್ಯು, ಮೂವರು ಗಂಭೀರ

Similar News