3 ಸಾವಿರ ಕೋಟಿ ರೂ. "ಕಾಮಧೇನು ಅನುದಾನ" ಇನ್ನೂ ಬಿಡುಗಡೆ ಮಾಡಿಲ್ಲ: BJP ಸರಕಾರದ ವಿರುದ್ಧ ಕಾಂಗ್ರೆಸ್ ಟೀಕೆ

ಬಿಜೆಪಿ ಆಡಳಿತದಲ್ಲಿ "ಗೋಮಾತೆ" ಅನಾಥೆ

Update: 2022-12-14 06:50 GMT

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ 3 ಸಾವಿರ ಕೋಟಿ ರೂ. "ಕಾಮಧೇನು ಅನುದಾನ" ಇನ್ನೂ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 3 ಸಾವಿರ ಕೋಟಇ ರೂ. "ಕಾಮಧೇನು ಅನುದಾನ" ನೀಡುತ್ತೇವೆ ಎಂದಿದ್ದ ಬಿಜೆಪಿ ಮೂರು ರೂಪಾಯಿಯನ್ನೂ ಕೊಟ್ಟಿಲ್ಲ. ಗೋಶಾಲೆಗಳು ನಿರ್ಮಾಣವಾಗಿಲ್ಲ, ಗೋವುಗಳ ಮೇವಿನಲ್ಲೂ ಕಮಿಷನ್,ಪಶು ವೈದ್ಯಕೀಯ ಸಿಬ್ಬಂದಿ ನೇಮಕವಿಲ್ಲ, ಚರ್ಮ ಗಂಟು ರೋಗ ನಿಯಂತ್ರಣವಿಲ್ಲ "ಗೋಮಾತೆ" ಬಿಜೆಪಿ ಆಡಳಿತದಲ್ಲಿ ಅನಾಥೆ ಎಂದು ಆರೋಪಿಸಿದೆ.

Similar News