ಅಪರಾಧ ಪ್ರಕರಣ; ಪೊಲೀಸರಿಗೆ ಸುಳಿವು ನೀಡುವವರಿಗೆ ಬಹುಮಾನ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ

Update: 2022-12-15 13:25 GMT

ಬೆಂಗಳೂರು, ಡಿ. 15: ಅಪರಾಧ ಪ್ರಕರಣದಲ್ಲಿ ಪೊಲೀಸರಿಗೆ ಸುಳಿವು ನೀಡುವವರಿಗೆ, ಬಹುಮಾನ ಮೊತ್ತವನ್ನು 50ಸಾವಿರ ರೂ., ಗಳಿಂದ 5ಲಕ್ಷ ರೂ.ಗಳಿಗೆ, ಹೆಚ್ಚಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅನುಮೋದಿಸಿದ್ದಾರೆ.

ಉದ್ಘೋಷಿತ ಅಪರಾಧಿಗಳನ್ನು ಪತ್ತೆ ಮಾಡುವ, ರಾಷ್ಟ್ರೀಯ ಸುರಕ್ಷತೆ, ಕಾನೂನು ಸುವ್ಯವಸ್ಥೆ, ಮಾದಕದ್ರವ್ಯ ಕಳ್ಳ ಸಾಗಣೆ, ಆಯುಧ ಕಳ್ಳ ಸಾಗಣೆ ಮತ್ತು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ದಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ಸುಳಿವು ನೀಡುವವರಿಗೆ ಬಹುಮಾನ ಮೊತ್ತ ಅಧಿಕ ಮಾಡಲಾಗಿದೆ.

ಈ ಸಂಬಂಧ ರಾಜ್ಯ ಪೊಲೀಸ್ ಮುಖ್ಯಸ್ಥರು ಸಲ್ಲಿಸಿದ ಪ್ರಸ್ತಾವಕ್ಕೆ, ಆರಗ ಜ್ಞಾನೇಂದ್ರ, ಅಂಕಿತ ಹಾಕಿದ್ದಾರೆ. ಅಲ್ಲದೆ, ಬಹುಮಾನದ ಮೊತ್ತವನ್ನು ಈ ಹಿಂದೆ 2017 ರಲ್ಲಿ ಪರಿಷ್ಕರಿಸಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಐಜಿಪಿ ಅವರ ಆರ್ಥಿಕ ವಿತ್ತಾಧಿಕರದಲ್ಲಿ ಯಾವುದೇ ನಗದು ಪ್ರೋತ್ಸಾಹ ಧನ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

Similar News