ಶಾಸಕರಿಗೆ ಮಾಹಿತಿ ನೀಡದೇ ಸದನದಲ್ಲಿ ಗಣ್ಯರ ಭಾವ ಚಿತ್ರ ಅನಾವರಣ: ಯು.ಟಿ ಖಾದರ್ ಅಸಮಾಧಾನ

Update: 2022-12-19 13:54 GMT

ಬೆಳಗಾವಿ, ಡಿ.19: ವಿರೋಧದ ನಡುವೆಯೂ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿರುವುದಕ್ಕೆ  ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಬಗ್ಗೆ ಶಾಸಕರಿಗಾಗಲಿ, ಸದನ ಸಲಹಾ ಸಮಿತಿಗಾಗಲಿ ಸರಕಾರ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದೆ.  

ಇದೇ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್,  'ವಿಧಾನ ಸಭೆಯೊಳಗೆ ಗಣ್ಯರ ಭಾವಚಿತ್ರ ಹಾಕುವ ಸಂದರ್ಭ ಯಾಕೆ ಹೀಗೆ?,ಯಾವುದೇ ಭಾವಚಿತ್ರ ಒಮ್ಮೆ ಸದನದಲ್ಲಿ ಅನಾವರಣ ಮಾಡಿದರೆ ಅದು ಸದನದ ಆಸ್ತಿಯಾಗುತ್ತದೆ. ಆದರೆ ಈ ಬಾರಿ ಯಾವ ನಾಯಕರ ಭಾವ ಚಿತ್ರ ಅನಾವರಣವಾಗಲಿದೆ ಎಂಬ ಮಾಹಿತಿ ಶಾಸಕರಿಗಾಗಲಿ, ಸದನ ಸಲಹಾ ಸಮಿತಿಗಾಗಲಿ ಇಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

''ವಿಧಾನಸಭೆ ಹಿರಿಯ ಅಧಿಕಾರಿಗಳನ್ನ ಕೇಳಿದರೆ ನಮಗೇನು ಗೊತ್ತಿಲ್ಲ ಅಂತಾರೆ.ಅನಾವರಣಕ್ಕೆ ದಿನಾಂಕ‌ ಮತ್ತು ಸಮಯ ನಿಗದಿಯಾಗಿದ್ದರೂ ಅಧಿಕೃತ ಮಾಹಿತಿ ನೀಡದೇ, ಸಂತೋಷ ಮತ್ತು ಸಂಭ್ರಮದಿಂದ ಆಚರಿಸ ಬೇಕಾದ ಕಾರ್ಯಕ್ರಮವನ್ನ ಕಣ್ಣಾಮುಚ್ಚಾಲೆ ಆಟವಾಗಿಸುತ್ತಿರುವುದು ಏಕೆ?'' ಎಂದು ಪ್ರಶ್ನೆ ಮಾಡಿದ್ದಾರೆ. 
 

Similar News