ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲಿನ ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ: ಸಚಿವ ಆರ್.ಅಶೋಕ್

Update: 2022-12-20 06:16 GMT

ಬೆಳಗಾವಿ, ಡಿ.20: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ನಿನ್ನೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, 'ಸಿಬಿಐ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ' ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್,  'ಸಿಬಿಐ ದಾಳಿ ಬಿಜೆಪಿಯ ಕುತಂತ್ರ' ಎಂಬ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ  ಪ್ರತಿಕ್ರಿಯೆ ನೀಡಿದರು.

''ಈ ಹಿಂದೆ ಜನಾರ್ಧನರೆಡ್ಡಿ ಮೇಲೂ ಸಿಬಿಐ ರೇಡ್ ಆಗಿತ್ತು. ಸಿದ್ದೇಶ್ವರ್ ನಿವಾಸದ ಮೇಲೂ ಐಟಿ ರೇಡ್ ಆಗಿತ್ತು. ಯಾಕೆ ಆಗ ಇವರ್ಯಾರು ಮಾತನಾಡಲಿಲ್ಲ. ಕಾಂಗ್ರೆಸ್ ನವರ ಮೇಲಾದ್ರೆ ಮಾತನಾಡ್ತಾರೆ. ಬಿಜೆಪಿಯವರ ಮೇಲೆ ಆದ್ರೆ ಬಾಯಿ ಬರಲ್ಲ ಏಕೆ?' ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು.

'ಪದೇ ಪದೇ ಬಿಜೆಪಿ ಮೇಲೆ ಹೇಳಿಕೆ ನೀಡುವುದು ಬೇಡ. ಸಿಬಿಐ ಸ್ವತಂತ್ರ್ಯ ಸಂಸ್ಥೆ. ಕಾನೂನಿನ ಪ್ರಕಾರವೇ ಕೆಲಸ ಮಾಡ್ತಿದೆ. ಕೋರ್ಟ್  ಅಲ್ಲಿ ಹೋರಾಟ ಮಾಡಲಿ' ಎಂದು ಹೇಳಿದರು.

Similar News