‘ಬಸ್ ಸ್ಟ್ಯಾಂಡ್’ ಕೆಡವಿ ಆಕಾರ ಬದಲಿಸೋದು ಬಿಟ್ಟು ಬಸ್ ಸಮಸ್ಯೆ ಬಗೆಹರಿಸಿ: ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು, ಡಿ.20: 'ಬಸ್ ಸ್ಟ್ಯಾಂಡ್’ ಆಕಾರ ಬದಲಿಸೋದು ಬಿಟ್ಟು ಬಸ್ ಸಮಸ್ಯೆ ಬಗೆಹರಿಸಿ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ , 'ಬಸ್ಟ್ಯಾಂಡ್ ಆಕಾರ ಹೇಗಿದೆ ಅಂತ ನೋಡೋ ಮೈಸೂರು ಸಂಸದರೇ, ಸ್ವಲ್ಪ ಆ ಬಸ್ಟ್ಯಾಂಡ್ ಗೆ ಎಷ್ಟು ಬಸ್ ಬರ್ತಿವೆ? ವಿದ್ಯಾರ್ಥಿಗಳು ಹೇಗೆ ಪ್ರಯಾಣ ಮಾಡ್ತಿದ್ದಾರೆ ಅಂತಾನೂ ನೋಡಿ. ಕಟ್ಟಿರೋ ಬಸ್ಟ್ಯಾಂಡ್ ಕೆಡವಿ ಆಕಾರ ಬದಲಿಸೋದು ಬಿಟ್ಟು ಈ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ' ಎಂದು ಹೇಳಿದೆ.
ಭಾರೀ ಚರ್ಚೆಗೆ ಕಾರಣವಾಗಿದ್ದ ಬಸ್ ನಿಲ್ದಾಣ: ಮೈಸೂರು ನಗರದ ಕೃಷ್ಣರಾಜ ವಿಧಾನ ಸಭೆ ಕ್ಷೇತ್ರದ ಊಟಿ ರಸ್ತೆಯಲ್ಲಿರುವ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. 'ಬಸ್ ನಿಲ್ದಾಣ ಗುಂಬಜ್ ರೀತಿ ಇದೆ. ಅದನ್ನು ಒಡೆಯುತ್ತೇನ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು.
ಬಸ್ಟ್ಯಾಂಡ್ ಆಕಾರ ಹೇಗಿದೆ ಅಂತ ನೋಡೋ ಮೈಸೂರು ಸಂಸದರೇ, ಸ್ವಲ್ಪ ಆ ಬಸ್ಟ್ಯಾಂಡ್ ಗೆ ಎಷ್ಟು ಬಸ್ ಬರ್ತಿವೆ? ವಿದ್ಯಾರ್ಥಿಗಳು ಹೇಗೆ ಪ್ರಯಾಣ ಮಾಡ್ತಿದ್ದಾರೆ ಅಂತಾನೂ ನೋಡಿ.
— Karnataka Congress (@INCKarnataka) December 20, 2022
ಕಟ್ಟಿರೋ ಬಸ್ಟ್ಯಾಂಡ್ ಕೆಡವಿ ಆಕಾರ ಬದಲಿಸೋದು ಬಿಟ್ಟು ಈ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ. @mepratap pic.twitter.com/V7jPiGsl7i