ಗಂಗಾವತಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ: ಮಾಜಿ ಸಚಿವ ಜನಾರ್ದನ ರೆಡ್ಡಿ ಭರವಸೆ

Update: 2022-12-23 12:34 GMT

ಗಂಗಾವತಿ, ಡಿ.23 : ಇಲ್ಲಿಯ ಫಿರ್ಜಾದ್ ಓಣಿಯಲ್ಲಿರುವ ಖಲೀಲ್ ಉಲ್ಲಾ ಖಾದ್ರಿ ಹೈದರ್ ದರ್ಗಾದ ಕಲ್ಚರಲ್ ಹಾಲ್ ನಿರ್ಮಾಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು, 6 ಕೋಟಿ ರೂ. ದೇಣಿಗೆ ನೀಡವುದಾಗಿ ಭರವಸೆ ನೀಡಿದ್ದಾರೆ.

ಖಲೀಲ್ ಉಲ್ಲಾ ಖಾದ್ರಿ ಹೈದರ ದರ್ಗಾ ಕ್ಕೆ ಭೇಟಿ ನೀಡಿ ಕಲ್ಚರಲ್ ಹಾಲ್ ಕಾಮಗಾರಿಯನ್ನು ವೀಕ್ಷಿಸಿದ ಜನಾರ್ದನ ರೆಡ್ಡಿ, ದರ್ಗಾದ ಶಾದಿ ಮಹಲ್ ನಿರ್ಮಾಣಕ್ಕೆ ಧನ ಸಹಾಯ ಮಾಡಲು ವಾಗ್ದಾನ ಮಾಡಿದ್ದು, 6 ಕೋಟಿ ರೂ. ವೆಚ್ಚದ ಕಾಂಟ್ರಾಕ್ಟ್​ಗೆ ಸಹಿ ಮಾಡಿದ್ದಾರೆ.

ಬೆಳಗಾವಿ ಮೂಲದ ಕಂಪನಿಯೊಂದಕ್ಕೆ ನಿರ್ಮಾಣ ಜವಾಬ್ದಾರಿ ನೀಡಿರುವ ರೆಡ್ಡಿ, ನೇರವಾಗಿ ಕಂಪನಿಗೆ ಹಣ ನೀಡುವುದಾಗಿ ಸಹಿ ಮಾಡಿದ್ದಾರೆ. ನಾನು ರಾಜಕೀಯದಲ್ಲಿ ಇರಲಿ, ಬಿಡಲಿ ದರ್ಗಾಕ್ಕೆ 6 ಕೋಟಿ ರೂ. ನೀಡುವ ಭರವಸೆ ನೀಡುತ್ತೇನೆ ಎಂದು ಇದೇ ವೇಳೆ ಹೇಳಿದ್ದಾರೆ. 

ಈ ಸಂದರ್ಭದಲ್ಲಿ ದರ್ಗಾದ ಪೀಠಾಧಿಪತಿ ಸೈಯದ್ ಖಧೀರ್ ಉಲ್ಲಾ ಇದ್ದರು.

Similar News