ಮೈಸೂರು ಮೃಗಾಲಯದಲ್ಲಿ ಹುಲಿಮರಿಗಳ ವೀಕ್ಷಣೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

Update: 2022-12-24 15:37 GMT

ಮೈಸೂರು,ಡಿ.24: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಎ.26 ರಂದು ಜನ್ಮ ತಾಳಿದ್ದಮೂರು ಹುಲಿ ಮರಿಗಳ ವೀಕ್ಷಣೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಚಾಲನೆ ನೀಡಿದರು. 

ಮೃಗಾಲಯದ ಗಂಡು ಹುಲಿ ರಾಕಿ ಹಾಗೂ ಹೆಣ್ಣು ಹುಲಿ ತಾರಾಗೆ ಈ ಮರಿಗಳು ಜನಿಸಿದ್ದವು. ಅಂದಿನಿಂದ ವೀಕ್ಷಣೆಗೆ ಬಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಟಿ. ಸೋಮಶೇಖರ್ ಅವರು ಚಾಲನೆ ನೀಡಿದರು. 

ಶಾಸಕ ಎಸ್‌.ಎ.ರಾಮದಾಸ್‌, ಮಹಾಪೌರ ಶಿವಕುಮಾರ್‌, ಉಪಮಹಾಪೌರ ರೂಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್‌, ಮುಡಾ ಅಧ್ಯಕ್ಷ ಯಶಸ್ವಿ ಎಸ್‌.ಸೋಮಶೇಖರ್‌, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ಕುಲಕರ್ಣಿ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್‌ ಗೋವರ್ದನ್‌, ಜ್ಯೋತಿ ರೇಚಣ್ಣ, ವರುಣ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಸಚ್ಚಿದಾನಂದ ಸೇರಿದಂತೆ  ಹಲವರು ಉಪಸ್ಥಿತರಿದ್ದರು.

Similar News