7 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ

Update: 2022-12-28 17:23 GMT

ಬೆಂಗಳೂರು, ಡಿ.28: ರಾಜ್ಯದ ವಿವಿಧ ಭಾಗದ ಏಳು ಡಿವೈಎಸ್ಪಿ(ಸಿವಿಲ್) ಅಧಿಕಾರಿಗಳನ್ನು ವರ್ಗಾಹಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. 

ಲಕ್ಷ್ಮಿಕಾಂತ್ ಆರ್(ಕುಣಿಗಲ್ ಉಪ ವಿಭಾಗ), ಶ್ರೀಕಾಂತ್ ಕೆ(ಭಟ್ಕಳ ಉಪ ವಿಭಾಗ), ರಮೇಶ್ ಜಿ.ಆರ್(ಸಿಐಡಿ), ನಿಂಗಪ್ಪ ಬಿ ಸಕ್ರಿ(ರಾಜ್ಯ ಗುಪ್ತವಾರ್ತೆ), ಶ್ರೀನಿವಾಸ್ ರೆಡ್ಡಿ ಎನ್.ಟಿ(ಸಿಐಡಿ), ಹರೀಶ್ ಜಿ(ಕೂಡ್ಲಗಿ ಉಪ ವಿಭಾಗ ಇಲ್ಲಿಯೇ ಮುಂದುವರೆಸಲಾಗಿದೆ), ಬೆಳ್ಳಿಯಪ್ಪ ಕೆ.ಯು(ಕುಂದಾಪುರ ಉಪ ವಿಭಾಗ) ವರ್ಗಾಹಿಸಲಾಗಿದೆ. 

Similar News