ಭಟ್ಕಳ: ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಕುಂದಾಪುರಕ್ಕೆ ವರ್ಗಾವಣೆ

Update: 2022-12-30 08:39 GMT

ಭಟ್ಕಳ: ಭಟ್ಕಳದ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಅವರನ್ನು ಕುಂದಾಪುರಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಒಂದು ವರ್ಷ 10 ತಿಂಗಳುಗಳಿಂದ ಡಿವೈಎಸ್ಪಿಯಾಗಿ ಅವರು, ಪೊಲೀಸ್‌ ವಲಯದಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನು ಸಂಪಾದಿಸಿಕೊಂಡಿದ್ದರು. ಇದೀಗ ಬೆಳ್ಳಿಯಪ್ಪ ಜಾಗಕ್ಕೆ ಕುಂದಾಪುರದಿಂದ ಶ್ರೀಕಾಂತ ಕೆ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಶ್ರೀಕಾಂತ ಈ ಹಿಂದೆ ಕುಮಟಾ ಸಿಪಿಐ, ನಂತರ ಜಿಲ್ಲಾ ಎಸಿಬಿಯಲ್ಲಿ ಡಿವೈಎಸ್ಪಿ ಆಗಿ ಕೆಲಸ ನಿರ್ವಹಿಸಿದ್ದರು.

Similar News