ಕೊಡಗಿನ ಸಾಮರಸ್ಯ- ಸಂಘರ್ಷದ ಕಥನಗಳು

Update: 2023-01-03 18:30 GMT

ಹಿರಿಯ ವಕೀಲರಾಗಿರುವ ವಿದ್ಯಾಧರ ಕುಡೆಕಲ್ಲು ಲೇಖಕರು, ಕಥೆಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಇತ್ತೀಚಿನ ಸಂಶೋಧನಾತ್ಮಕ ಕೃತಿ ಅಮರ ಸುಳ್ಯ -1837 (ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ) ಕೃತಿ ಚರ್ಚೆಯಲ್ಲಿದೆ. ತಮ್ಮ ಹಲವು ಬರಹಗಳಲ್ಲಿ ಕೊಡಗು ಮತ್ತು ಸುಳ್ಯ ಪರಿಸರದ ಚರಿತ್ರೆಯ ಕುತೂಹಲಕಾರಿ ವಿವರಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಅಮರ ಸುಳ್ಯ ಹೋರಾಟದ ಬಗ್ಗೆ ವಿದ್ಯಾಧರ ಅವರು ನೀಡಿರುವ ಚಾರಿತ್ರಿಕ ವಿವರಣೆ, ದಾಖಲಾತಿ, ವಿಮರ್ಶೆ, ಚರ್ಚೆಯು ಓದುಗರಿಗೆ ಮತ್ತು ಸಂಶೋಧಕರಿಗೆ ಮಹತ್ವದ ಆಕರಗಳಾಗಿ ಗುರುತಿಸಿಕೊಂಡಿವೆ.

ಬ್ರಿಟಿಷ್ ಬೆಂಬಲಿಗರಾದ ಭಾರತೀಯ ಬರಹಗಾರರು, ಇತಿಹಾಸಕಾರರು ಅತ್ಯಂತ ಶ್ರದ್ಧೆಯಿಂದ ಚಿಕ್ಕ ವೀರರಾಜನ ವ್ಯಕ್ತಿತ್ವವನ್ನು ಹರಿದು ಹಂಚಿಹಾಕಿದ್ದಾರೆ. ಅವನನ್ನು ಕೊಡಗಿನ ಸಾಮಾಜಿಕ ವಲಯದಿಂದ ದೂರ ತಳ್ಳಿದ್ದಾರೆ. ಆತನನ್ನು ಮಾತ್ರವಲ್ಲ, ಸಂಪೂರ್ಣ ಹಾಲೇರಿ ಅರಸೊತ್ತಿಗೆಯೇ ಇವರ ವಕ್ರದೃಷ್ಟಿಗೆ ಒಳಗಾಗಿದೆ. ಜೊತೆಗೆ ಮುಸ್ಲಿಮರಿಗೂ ಕೊಡಗಿನ ಎಲ್ಲ ಸಮುದಾಯಗಳಿಗೂ ಇದ್ದ ಸುದೀರ್ಘವಾದ ಆಂತರಿಕ ಸಂಬಂಧವನ್ನು ಇಂದಿನ ರಾಜಕೀಯ ಉದ್ದೇಶಕ್ಕಾಗಿ ಮರೆತುಬಿಟ್ಟಿದ್ದೇವೆ. 

ಸಮಕಾಲೀನ ರಾಜಕೀಯ ಸನ್ನಿವೇಶಕ್ಕೆ ಅನುಗುಣವಾಗಿ ಕೊಡಗನ್ನು ಮುಸ್ಲಿಮ್ ದ್ವೇಷದ ಅಗ್ನಿಕುಂಡವನ್ನಾಗಿಸುವ ಪ್ರಯತ್ನಗಳು ನಿರಂತರವಾಗಿ ಚಾಲ್ತಿಯಲ್ಲಿವೆ. ಚರಿತ್ರೆಗೆ ಬೇರೆ ಬೇರೆ ಬಣ್ಣವನ್ನು ಹಚ್ಚಿ ವಿಕೃತಗೊಳಿಸುವ ಕೆಲಸಗಳು ಭರದಿಂದ ನಡೆದಿವೆ. ಅಂತಹ ವಿಚ್ಛಿದ್ರಕಾರಿ ಶಕ್ತಿಗಳ ಜೊತೆಗೆ ಸ್ಥಳೀಯ ಪ್ರತ್ಯೇಕತಾವಾದಿ ಕ್ರಿಮಿಗಳು ಕೂಡ ಕೈಜೋಡಿಸಿವೆ. ಟಿಪ್ಪುಸುಲ್ತಾನನ ಜನ್ಮದಿನವನ್ನು ಆಚರಿಸಲು ಹಿಂದಿನ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ ಇಲಾಖೆಗೆ ವಹಿಸಿದ ಬಾಲಿಶವಾದ ಜಾತ್ಯತೀತ ನಿಲುವು ಸಹ ಉರಿಯುವ ಬೆಂಕಿಗೆಎಣ್ಣೆಯನ್ನು ಸುರಿದು ಪ್ರಕ್ಷುಬ್ಧತೆಯ ಜ್ವಾಲೆ ಇನ್ನಷ್ಟು ಪ್ರಖರವಾಗಿ, ಇನ್ನಷ್ಟು ನೀಳವಾಗಿ ಚಾಚಿಕೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಸಮಾಜ, ಅದರಲ್ಲಿ ಮುಸ್ಲಿಮರ ಸ್ಥಾನಮಾನ, ಅಂತೆಯೇ ಮುಸ್ಲಿಮೇತರರೊಂದಿಗಿನ ಸಂಬಂಧಗಳ ಒಂದಿಷ್ಟು ಪರಿಚಯವನ್ನು ಮಾಡುವುದು ಲೇಖನದ ಉದ್ದೇಶ. ಈ ಪ್ರಾಂತವನ್ನು ಆಳಿದ ಅರಸರ, ಅದರಲ್ಲೂ ಮುಖ್ಯವಾಗಿ ಹಾಲೇರಿ ಸಂಸ್ಥಾನದ ರಾಜರುಗಳ ಸಾಮಾಜಿಕ ನಿಲುವುಗಳು ಹೇಗಿದ್ದವು ಎನ್ನುವುದರ ಬಗ್ಗೆ ನೋಡುವ ಪ್ರಯತ್ನ ಸಹ ಇಲ್ಲಿದೆ. ಹೈದರ್ ಮತ್ತು ಟಿಪ್ಪು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕೊಡಗಿನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳು ಹಾಗೂ ಸಾಮಾಜಿಕ ವಿಪ್ಲವಗಳು ಈ ಭಾಗದ ಜನರನ್ನು ಎಷ್ಟರ ಮಟ್ಟಿಗೆ ಮುಸ್ಲಿಮ್ ದ್ವೇಷಿಗಳನ್ನಾಗಿ ಪರಿವರ್ತಿಸಿದವು ಎನ್ನುವುದನ್ನು ಒರೆಗೆ ಹಚ್ಚಬೇಕಿದೆ.

ಎಲ್ಲೆಡೆ ನಾವು ನೋಡುವಂತೆ ಕೊಡಗಿನಲ್ಲಿ ಸಹ ಮುಸ್ಲಿಮರು ಮತ್ತು ಹಿಂದೂಗಳು ಪರಸ್ಪರ ಅವಲಂಬಿತರಾಗಿ ಬದುಕುವುದನ್ನು, ವ್ಯಾವಹಾರಿಕ ಸಂಬಂಧಗಳನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. 18ನೇ ಶತಮಾನದ ಕೊನೆಯ ಭಾಗದಲ್ಲಿ ಟಿಪ್ಪು ನಡೆಸಿದ ಮತಾಂತರದ ಪ್ರಹಸನವು ಈ ಭಾಗದಲ್ಲಿ ಕೊಡವ ಮುಸ್ಲಿಮ್ ಅಥವಾ ಜಮ್ಮಾ ಮಾಪಿಳ್ಳೆ ಎಂಬ ಪ್ರತ್ಯೇಕವಾದ ಮುಸ್ಲಿಮ್ ಪಂಗಡವೊಂದರ ಉಗಮಕ್ಕೆ ಕಾರಣವಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಕೊಡಗು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಅಂದಿನ ದಿನಗಳ ಇತಿಹಾಸದ ಎಳೆಗಳು ಇಂದಿನ ದಿನದ ಸಮಾಜದಲ್ಲಿ ಮತೀಯ ಅಸಹನೆಯನ್ನು ಬಡಿದೆಬ್ಬಿಸುವ ದಾಳಗಳಾಗಿ ಬಳಕೆಯಾಗುತ್ತಿವೆ. ಕೋಮುವಾದಿ ರಾಜಕಾರಣ ಒಂದೆಡೆ ಸಮಾಜದ ನೇಯ್ಗೆಯನ್ನು ಛಿದ್ರಗೊಳಿಸುತ್ತಾ ಹೋಗುತ್ತಿರುವಾಗ, ಇನ್ನೊಂದು ಕಡೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪಕ್ಷಗಳು ಹರಿದುಹೋದ ಮನಸ್ಸುಗಳನ್ನು ಸೇರಿಸುವ ಪ್ರಯತ್ನದಲ್ಲಿ ಸೋತಿವೆ. ಅವರುಗಳ ರಾಜಕೀಯ ಅಪ್ರಬುದ್ಧತೆ ಎದ್ದು ಕಾಣಿಸುತ್ತಿದೆ.

ಕೊಡಗಿನ ಸಮಾಜ ರಚನೆಯಲ್ಲಿ ಮುಸ್ಲಿಮರ ಪಾತ್ರ ಗಣನೀಯವಾಗಿದೆ. ಕೊಡಗಿನಲ್ಲಿ 16ನೇ ಶತಮಾನದಲ್ಲಿ ಇಸ್ಲಾಮ್ ಪ್ರಚಲಿತದಲ್ಲಿದ್ದ ಬಗ್ಗೆ ಕುರುಹುಗಳು ಲಭ್ಯವಿವೆ. ವೀರಾಜಪೇಟೆ ತಾಲೂಕಿನ ಎಡಪಾಲ ಮಸೀದಿ ಮತ್ತು ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಮಾಪಿಳ್ಳೆತೋಡು ಮಸೀದಿ ಅಂದಿನಿಂದ ಇಂದಿನವರೆಗೂ ಕಾರ್ಯ ನಿರ್ವಹಿಸುತ್ತಿವೆ.

ಸೂಫಿ ನೆಲೆ ಇರುವಲ್ಲಿ ಧಾರ್ಮಿಕ ಸಾಮರಸ್ಯದ ಬದುಕು ಇರುವುದನ್ನು ಎಲ್ಲೆಡೆ ನೋಡಬಹುದು. ಉರೂಸ್, ಜಾತ್ರೆಗಳನ್ನು ಒಟ್ಟಿಗೆ ಸೇರಿ ನಡೆಸುವುದು ಇಂತಹ ಜಾಗಗಳ ಅಸ್ಮಿತೆಯಾಗಿದೆ. ಎಮ್ಮೆಮಾಡು ದರ್ಗಾದ ಖ್ಯಾತಿ ನೆರೆಯ ಜಿಲ್ಲೆಗಳಿಗೆ ಮಾತ್ರವಲ್ಲ, ದೂರದೂರಿಗೂ ಹಬ್ಬಿದೆ. ಇಲ್ಲಿಗೆ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣಗಳ ಭಕ್ತರೂ ಬರುತ್ತಾರೆ. ಮುಸ್ಲಿಮರು ಬಾಹುಳ್ಯದಲ್ಲಿರುವ ಎಮ್ಮೆಮಾಡು ದರ್ಗಾದ ವಾರ್ಷಿಕ ಉತ್ಸವವು ಕೊಡವ ಸಮುದಾಯಕ್ಕೆ ಸೇರಿದ ಮಣವಟ್ಟಿರ ಕುಟುಂಬದ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. 

ಅಂದಾಜು 370 ವರ್ಷಗಳ ಹಿಂದೆ ಈಜಿಪ್ಟಿನಿಂದ ಬಂದ ಸೂಫಿ ಸಂತ ಹಝ್ರತ್ ಸೂಫಿ ಶಹೀದ್ ವಲಿಯುಲ್ಲಾಹಿ ತನ್ನ ಜೊತೆಗಾರ ಸಯ್ಯದ್ ಹಸನ್ ಸಖಾಫ್ ಹಳ್ರಮಿ ಜೊತೆಗೆ ಮಡಿಕೇರಿ ತಾಲೂಕಿನ ಎಮ್ಮೆಮಾಡು ಎಂಬಲ್ಲಿ ತನ್ನ ಜೀವಿತಾವಧಿಯ ಕೊನೆಯಲ್ಲಿ ನೆಲೆಯೂರಿದರು. ಈ ಸಂತನನ್ನು ಪವಾಡ ಪುರುಷನೆಂದು ನಂಬಿರುವ ಹಿಂದೂ ಮುಸ್ಲಿಮ ರೆಲ್ಲರೂ ‘ದೊಡ್ಡವರು’ ಎಂದೇ ಸಂಬೋಧಿಸುತ್ತಾರೆ; ದೊಡ್ಡವರಿಗೆ ಹರಕೆ ಕಟ್ಟುತ್ತಾರೆ.

ಸೂಫಿ ನೆಲೆ ಇರುವಲ್ಲಿ ಧಾರ್ಮಿಕ ಸಾಮರಸ್ಯದ ಬದುಕು ಇರುವುದನ್ನು ಎಲ್ಲೆಡೆ ನೋಡಬಹುದು. ಉರೂಸ್, ಜಾತ್ರೆಗಳನ್ನು ಒಟ್ಟಿಗೆ ಸೇರಿ ನಡೆಸುವುದು ಇಂತಹ ಜಾಗಗಳ ಅಸ್ಮಿತೆಯಾಗಿದೆ. ಎಮ್ಮೆಮಾಡು ದರ್ಗಾದ ಖ್ಯಾತಿ ನೆರೆಯ ಜಿಲ್ಲೆಗಳಿಗೆ ಮಾತ್ರವಲ್ಲ, ದೂರದೂರಿಗೂ ಹಬ್ಬಿದೆ. ಇಲ್ಲಿಗೆ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣಗಳ ಭಕ್ತರೂ ಬರುತ್ತಾರೆ. ಮುಸ್ಲಿಮರು ಬಾಹುಳ್ಯದಲ್ಲಿರುವ ಎಮ್ಮೆಮಾಡು ದರ್ಗಾದ ವಾರ್ಷಿಕ ಉತ್ಸವವು ಕೊಡವ ಸಮುದಾಯಕ್ಕೆ ಸೇರಿದ ಮಣವಟ್ಟಿರ ಕುಟುಂಬದ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಪಾಲಿಬೆಟ್ಟದ ಪಠಾಣ್ ಬಾಬಾ ದರ್ಗಾ ಇನ್ನೊಂದು ಪ್ರಸಿದ್ಧ ಸೂಫಿ ಕ್ಷೇತ್ರ. ಕೊಡಗಿನಲ್ಲಿ ಒಟ್ಟು 27 ದರ್ಗಾಗಳು ಇವೆ (ಮಾಹಿತಿ: ರಫೀಕ್ ತೂಚಮಕೇರಿ). ಈ ಎಲ್ಲ ಧಾರ್ಮಿಕ ಕ್ಷೇತ್ರಗಳ ಉತ್ಸವಗಳು ಉಭಯ ಧರ್ಮಗಳ ಸಹಭಾಗಿತ್ವದೊಂದಿಗೆ ನಡೆಯುತ್ತವೆ.

ಟಿಪ್ಪು ಸುಲ್ತಾನ ನಡೆಸಿದ ಮತಾಂತರದ ಕತೆ

ಸ್ವತಂತ್ರ ಕೊಡಗು ಸಾಮ್ರಾಜ್ಯದ ಸ್ಥಾಪನೆಯನ್ನು ಮಾಡಿದ್ದು 15ನೇ ಶತಮಾನದ ಕೊನೆಯಲ್ಲಿ ಇಕ್ಕೇರಿಯಿಂದ ಬಂದು ಮಡಿಕೇರಿಯ ಹತ್ತಿರ ಹಾಲೇರಿ ಎಂಬಲ್ಲಿ ‘ಬೂದಿ ಚಾವಡಿ’ ಎಂಬ ಆಧ್ಯಾತ್ಮಿಕ ಕೇಂದ್ರವನ್ನು ಹುಟ್ಟುಹಾಕಿದ ವೀರಪ್ಪೊಡೆಯ ಅಥವಾ ವೀರರಾಜ ಎಂಬ ಶಿವಾಚಾರದ ಸ್ವಾಮಿ. ಈತ ಹಾಲೇರಿಯಿಂದಲೇ ತನ್ನ ನೀಳ ಬಾಹುಗಳನ್ನು ಇಂದಿನ ಕೊಡಗಿನುದ್ದಕ್ಕೂ ಚಾಚಿ ಈ ಪ್ರಾಂತದ ಸಂಪೂರ್ಣ ಆಧಿಪತ್ಯವನ್ನು ಸಾಧಿಸಿದ. ನಂತರದ ರಾಜರುಗಳಲ್ಲಿ ಅತ್ಯಂತ ಬಲಿಷ್ಠನೆಂದರೆ ವೀರಪ್ಪೊಡೆಯನ ಮರಿಮೊಮ್ಮಗ ದೊಡ್ಡ ವೀರಪ್ಪ. ಮುಂದೆ 1770ರ ನಂತರದಲ್ಲಿ ಹಾಲೇರಿ ರಾಜವಂಶವು ಹಲವು ಏಳುಬೀಳುಗಳನ್ನು ಕಂಡಿತು. ಅದು ಎರಡು ವಿಭಿನ್ನ ಕವಲುಗಳಾಗಿ ಮಾರ್ಪಟ್ಟಿತು. ಅವುಗಳೆಂದರೆ ಹಾಲೇರಿ ಹಾಗೂ ಹೊರಮಲೆನಾಡು ಎಂಬ ವಿಭಾಗಗಳು. ಹೀಗೆ ಎರಡು ಆಡಳಿತ ಕೇಂದ್ರಗಳ ಸ್ಥಾಪನೆಯೊಂದಿಗೆ ಪರಸ್ಪರ ತೀವ್ರಸ್ತರದ ತಿಕ್ಕಾಟ ಆರಂಭವಾಯಿತು. ಹಾಲೇರಿಯ ಲಿಂಗರಾಜ ಮತ್ತು ಹೊರಮಲೆನಾಡಿನ ದೇವಪ್ಪರಾಜ ಇವರು ಕೊಡಗಿನ ಸಿಂಹಾಸನಕ್ಕಾಗಿ ಕಚ್ಚಾಡತೊಡಗಿದರು.

ದೇವಪ್ಪರಾಜನಿಗೆ ಪ್ರಜೆಗಳ ಬೆಂಬಲವಿತ್ತು, ಅವನು ಅರಸೊತ್ತಿಗೆಯ ಗಾದಿಯನ್ನೇರಿದನು. ಅವನ ವಿರುದ್ಧ ಪಿತೂರಿ ಮಾಡಿದ ಲಿಂಗರಾಜ ಮೈಸೂರಿನ ಹೈದರಲಿಯ ಮೊರೆಹೋದ. ಇದರಿಂದ ಕೊಡಗಿನ ಮೇಲೆ ನಿಯಂತ್ರಣ ಸಾಧಿಸಲು ಹೈದರಲಿಗೆ ಅನುಕೂಲವಾಯಿತು. ಕೊಡಗಿನಿಂದ ಜೀವರಕ್ಷಣೆಗಾಗಿ ಮಲೆಯಾಳ ಪ್ರಾಂತಕ್ಕೆ ಓಡಿ ಹೋಗಿ, ಅಲ್ಲಿಂದ ಮರಾಠರ ಆಶ್ರಯ ಕೋರಿ ಹೊರಟಿದ್ದ ದೇವಪ್ಪರಾಜ ಕೊನೆಗೆ ಹರಿಹರದಲ್ಲಿ ಹೈದರಲಿಗೆ ಸೆರೆಸಿಕ್ಕು ಶ್ರೀರಂಗಪಟ್ಟಣದಲ್ಲಿ ಕುಟುಂಬ ವರ್ಗದ ಸಮೇತ ಮರಣದಂಡನೆಗೆ ಒಳಗಾದ. ಹೀಗೆ ಕುತಂತ್ರದಿಂದ ಕೊಡಗನ್ನು ಪಡೆದುಕೊಂಡರೂ ದುರ್ಬಲ ಆಡಳಿತಗಾರನಾದ ಲಿಂಗರಾಜನಿಗೆ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. 1780ರಲ್ಲಿ ಆತ ಮೃತಪಟ್ಟ. ಅವನ ಅಪ್ರಾಪ್ತ ವಯಸ್ಸಿನ ಮಕ್ಕಳಾದ ದೊಡ್ಡ ವೀರರಾಜೇಂದ್ರ ಮತ್ತಿತರರನ್ನು ಹೈದರಲಿ ತನ್ನ ಸುಪರ್ದಿಗೆ ಪಡೆದುಕೊಂಡು ಕೊಡಗನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ಆಡಳಿತ ನಿರ್ವಹಿಸಲು ಅಧಿಕಾರಿಗಳನ್ನು ನೇಮಿಸಿದ. 1782ರಲ್ಲಿ ಹೈದರಲಿ ಬೆನ್ನಲ್ಲಿ ವ್ರಣವಾಗಿ ಮರಣವನ್ನಪ್ಪಿದ.

ದೊಡ್ಡ ವೀರರಾಜನು ಪಿರಿಯಾಪಟ್ಟಣದಲ್ಲಿ ಬಂದಿಯಾಗಿದ್ದ ಸಂದರ್ಭದಲ್ಲಿ ಟಿಪ್ಪುವಿನ ಅಧಿಕಾರಿ ಖಾದರ್‌ಖಾನ್ ಕೈಸಗಿಯು ವೀರರಾಜನನ್ನು ಪ್ರೀತಿಯಿಂದ ನೋಡಿಕೊಂಡಿದ್ದ. ಅಲ ಖಾದರ್‌ಖಾನ್ ಕೈಸಗಿ ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತಾನೆ. ಮುಂದೆ ವೀರರಾಜನು ಅವನಿಗೆ ಆಭಾರಿಯಾದ ಘಟನೆ ನಡೆಯುತ್ತದೆ. ಅದು ದೊಡ್ಡ ವೀರರಾಜ ಕೊಡಗು ಸಾಮ್ರಾಜ್ಯದ ಮರುಸ್ಥಾಪನೆಯ ಪ್ರಯತ್ನದಲ್ಲಿದ್ದ ಸಮಯ. ಖಾದರ್‌ಖಾನ್ ಕೈಸಗಿ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದ ಟಿಪ್ಪುವಿನ ಸೈನ್ಯದ ಮುಖ್ಯಸ್ಥನಾಗಿದ್ದನು.

ಟಿಪ್ಪು ಪರಿಪೂರ್ಣ ಅರಸನಾಗಿ ಮೈಸೂರು ಸಿಂಹಾಸವನ್ನೇರಿದ. ಈ ನಡುವೆ ಕೊಡಗಿನಲ್ಲಿ ನಿರಂತರವಾಗಿ ದಂಗೆಗಳು ನಡೆದವು. ಕೊಡಗಿನ ಜನ ಕಂದಾಯ, ತೆರಿಗೆಗಳನ್ನು ನೀಡಲಿಲ್ಲ. ಅವರನ್ನು ಶಿಕ್ಷಿಸಲು ಬಂದ ಮೈಸೂರಿನ ಸೈನ್ಯ ಕೊಡಗಿನ ಜಮ್ಮಾ ರೈತರ ದಂಡಿನ ಆಘಾತಕ್ಕೆ ಸಿಕ್ಕಿ ಅಪಾರವಾದ ಸಾವು ನೋವುಗಳನ್ನು ಕಾಣಬೇಕಾಯಿತು. 1785ರಲ್ಲಿ ಉಲುಗುಲಿ ಸಂತೆಮಾಳದಲ್ಲಿ ಬೀಡುಬಿಟ್ಟಿದ್ದ ಟಿಪ್ಪುವಿನ ಸೇನಾಧಿಕಾರಿ ಝೈನುಲ್ ಆಬಿದೀನ್‌ನ 15,000 ಸಂಖ್ಯೆಯ ಬೃಹತ್ ಸೈನ್ಯವನ್ನು ಕೇವಲ 5,000 ಜಮ್ಮಾ ರೈತರು ಸೋಲಿಸಿಬಿಟ್ಟರು. ಈ ವೇಳೆಗೆ ಟಿಪ್ಪು ಸುಲ್ತಾನನ ತಾಳ್ಮೆ ಕೆಟ್ಟಿತು. 

ಅದಾಗಿ ಎರಡು ತಿಂಗಳ ನಂತರ ಫ್ರೆಂಚ್ ದಂಡನಾಯಕ ಲಾಲಿಯ ಜೊತೆಗೆ ಸಮರ್ಥ ತಂಡವನ್ನು ಕಳುಹಿಸಿ ಮಡಿಕೇರಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೇರುತ್ತಾನೆ. ಮುಂದೆ ತಾನೇ ಸೇನೆಯನ್ನು ಮುನ್ನಡೆಸಿ ತಲಕಾವೇರಿ ಸನಿಹದ ದೇವಟಿಪರಂಬು ಎಂಬಲ್ಲಿ ಬಿಡಾರ ಹೂಡುತ್ತಾನೆ. ದಂಗೆಯೇಳುತ್ತಿದ್ದ ರಿಂಗ್ ಲೀಡರ್‌ಗಳನ್ನು ಮಟ್ಟಹಾಕಬೇಕೆಂದು ಅವನು ತೀರ್ಮಾನಿಸಿದ್ದ. ಒಮ್ಮೆ ಮಾತೃಧರ್ಮದಿಂದ ಹೊರಹಾಕಿದರೆ ಅವರ ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆ ಬುಡಸಮೇತ ಬಿದ್ದುಹೋಗುತ್ತದೆಯೆಂದು ಅವನಿಗೆ ತಿಳಿದಿತ್ತು. 

ಅಲ್ಲಿಗೆ ಜಮ್ಮಾ ರೈತರ ಮಿಲಿಟರಿ ಸಹ ಕುಸಿದು ಹೋಗುತ್ತದೆ ಎಂದವನು ಸರಿಯಾಗಿಯೇ ಯೋಚಿಸಿದ್ದ. ಕೊಡಗು ಮತ್ತು ಕೇರಳದ ಕೆಲವು ಸಮುದಾಯಗಳ ಬಹುಪತಿತ್ವ ಪದ್ಧತಿಯನ್ನು ಟಿಪ್ಪು ನಿಕೃಷ್ಟವಾಗಿ ನೋಡುತ್ತಿದ್ದನೆಂದು ದಾಖಲೆಗಳು ಹೇಳುತ್ತವೆ. ಈ ಜನರಿಗೆ ಸಂಸ್ಕೃತಿ ಎಂದರೇನು ಎಂಬುದನ್ನು ಕಲಿಸುತ್ತೇನೆ ಎಂಬುದಾಗಿ ಟಿಪ್ಪು ಹೇಳಿದ್ದ ಎಂದು ಯುರೋಪಿಯನ್ ಬರಹಗಾರ ಕರ್ನಲ್ ಮಾರ್ಕ್ ವಿಲ್ಕ್ಸ್ ಬರೆಯುತ್ತಾನೆ. 

ಟಿಪ್ಪು ನಡೆಸಿದ ಮತಾಂತರ ಪ್ರಹಸನದ ಮೇಲೆ ಆತನ ಈ ದೃಷ್ಟಿಕೋನ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಕೊಡಗಿನ ಜನರನ್ನು ಮಾತುಕತೆಗೆಂದು ತಾನು ಉಳಿದುಕೊಂಡಿದ್ದ ದೇವಟಿಪರಂಬು ಪ್ರದೇಶಕ್ಕೆ ಬರಮಾಡಿದ. ಅಲ್ಲಿ ಅವರನ್ನು ಸೆರೆ ಹಿಡಿದು ಮತಾಂತರ ಮಾಡಿದ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಿ ಅವರನ್ನು ಶೇಕ್, ಸೈಯದ್, ಮೊಗಲ್ ಹಾಗೂ ಪಠಾಣ್ ಪಂಗಡಕ್ಕೆ ಸೇರಿಸಲಾಯಿತು. 1799ರಲ್ಲಿ ಟಿಪ್ಪು ರಣರಂಗದಲ್ಲಿ ಹತ್ಯೆಯಾದ ನಂತರ ಅವರಲ್ಲಿ ಕೆಲವರು ಕೊಡಗಿಗೆ ಹಿಂದಿರುಗಿದರು. ಸ್ವತಃ ದೊಡ್ಡ ವೀರರಾಜೇಂದ್ರ ಒಡೆಯ ಬ್ರಿಟಿಷರನ್ನು ಮನವೊಲಿಸಿ ಉಪಾಯದಿಂದ ಅವರನ್ನು ಕೊಡಗಿಗೆ ಬರುವಂತೆ ಮಾಡುತ್ತಾನೆ. 

ಆದರೆ ಕೊಡಗಿನ ಜನ ಹಿಂದಿರುಗಿ ಬಂದವರನ್ನು ತಮ್ಮವರೆಂದು ಸ್ವೀಕರಿಸಲಿಲ್ಲ, ಇಸ್ಲಾಮ್‌ಗೆ ಮತಾಂತರಗೊಂಡಿದ್ದ ತಮ್ಮ ಸ್ವಂತ ಅಣ್ಣತಮ್ಮಂದಿರನ್ನು ತಮ್ಮ ಕೌಟುಂಬಿಕ ವಲಯದೊಳಗೆ ಸೇರಿಸಿಕೊಳ್ಳಲಿಲ್ಲ. ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆಯೆಂಬ ದುರಾಸೆ ಸಹ ಇಲ್ಲಿ ಕೆಲಸ ಮಾಡಿದೆ. ಈ ಸಂಕೀರ್ಣ ಸ್ಥಿತಿಯನ್ನು ತಿಳಿದುಕೊಂಡ ದೊಡ್ಡ ವೀರರಾಜೇಂದ್ರ ಒಡೆಯ ಅತ್ಯಂತ ಉದಾರ ಮನಸ್ಸಿನಿಂದ ಅವರಿಗೆ ಜಹಗೀರುಗಳನ್ನು ನೀಡಿದ. ಅವರ ಧಾರ್ಮಿಕ ಹಕ್ಕುಗಳನ್ನು ಗೌರವಿಸಿ, ಅವರಿಗಾಗಿ ಕೇರಳದಿಂದ ಮಲೆಯಾಳಿ ಮೌಲ್ವಿಗಳನ್ನು ಕರೆಸಿ ಮಸೀದಿಗಳನ್ನು ನಿರ್ಮಿಸಿಕೊಟ್ಟ. 

ವೀರರಾಜನ ಇಂತಹ ಉದಾತ್ತ ಮನಃಸ್ಥಿತಿಗೆ ಅವನ ವೈಯಕ್ತಿಕ ಬದುಕು ಸಹ ಒಂದು ಕಾರಣವಾಗಿತ್ತು. ಟಿಪ್ಪು ಸುಲ್ತಾನನು ವೀರರಾಜನ ಇಬ್ಬರು ಸಹೋದರಿಯರನ್ನು ಮುಸಲ್ಮಾನರನ್ನಾಗಿ ಪರಿವರ್ತಿಸಿ ತನ್ನ ಜನಾನಾಕ್ಕೆ ಸೇರಿಸಿಕೊಂಡಿದ್ದ. ಆಗ ದೇವಮ್ಮಾಜಿಗೆ ಟಿಪ್ಪುವು ಮೆಹ್ತಾಬ್ ಅಂದರೆ ಚಂದ್ರ ಎಂದು ಮತ್ತು ನೀಲಮ್ಮಾಜಿಗೆ ಅಫ್ತಾಬ್ ಅಂದರೆ ಸೂರ್ಯ ಎಂಬ ಹೆಸರಿಟ್ಟನು. 

ಅದಲ್ಲದೆ ಸ್ವತಃ ವೀರರಾಜನನ್ನು ಸಹ ಮತಾಂತರ ಮಾಡಲಾಗಿತ್ತು. ಆದರೆ ಅದನ್ನು ಮುಚ್ಚಿಟ್ಟ ಅರಸ ಕೊಡಗು ದೇಶದ ಪಟ್ಟವೇರಿದ ನಂತರ ಲಿಂಗಾಯತ ಪರಂಪರೆಯಲ್ಲೇ ಮುಂದುವರಿದ. ಟಿಪ್ಪುವಿನ ಮರಣಾನಂತರ ತನ್ನ ಮತಾಂತರಿ ಸಹೋದರಿಯರನ್ನು ಕೊಡಗಿಗೆ ಕರೆಯಿಸಿ, ಅವರಿಗೆ ನಾಲ್ಕುನಾಡು ಅರಮನೆಯಲ್ಲಿ ಆಶ್ರಯ ನೀಡಿದ್ದ. ಇಲ್ಲೆಲ್ಲೂ ಮತೀಯ ಮಲಿನತೆಯ ಕುರುಹುಗಳು ಗೋಚರಿಸುವುದಿಲ್ಲ. 

ಆದರೆ ಕುಚೋದ್ಯವೆಂದರೆ ಟಿಪ್ಪು ನಡೆಸಿದ ರಾಜಕೀಯ ಮತಾಂತರದ ನಂತರದಲ್ಲಿ ನಡೆದ ಸಾಮಾಜಿಕ ತಿರಸ್ಕಾರದ ಕಾರಣದಿಂದ ಕೊಡಗಿನ ಸಮಾಜವು ಕೊಡವ ಮುಸ್ಲಿಮ್ ಅಥವಾ ಜಮ್ಮಾ ಮಾಪಿಳ್ಳೆ ಎಂಬ ಹೊಸ ಪಂಗಡದ ಉಗಮಕ್ಕೆ ದಾರಿ ಮಾಡಿಕೊಟ್ಟಿತು. ತಮ್ಮದೇ ನೆಲದಲ್ಲಿ ಇವರು ಪರಕೀಯ ಭಾವದಿಂದ ನರಳುವ ಸ್ಥಿತಿ ನಿರ್ಮಾಣವಾಯಿತು. ಇವರ ಈ ದಯನೀಯ ಪರಿಸ್ಥಿತಿಯ ಬಗ್ಗೆ ನಾಡಿನ ಪ್ರಸಿದ್ಧ ಇತಿಹಾಸಕಾರ ವಿಜಯ್ ಪೂಣಚ್ಚ ತಂಬಂಡ ತಮ್ಮ ‘ರಾಜೇಂದ್ರನಾಮೆ: ಮರು ಓದು ಮತ್ತು ಅಮರ ಸುಳ್ಯ ಸಂಗ್ರಾಮ 1837’ ಕೃತಿಗಳಲ್ಲಿ ವಿಸ್ತೃತವಾಗಿ ದಾಖಲಿಸಿದ್ದಾರೆ. 

ಹಾಗಿದ್ದರೂ ಇಲ್ಲಿನ ಕೆಲವು ಕುಟುಂಬಗಳು ಮಾನವೀಯತೆಯನ್ನು ಮೆರೆದಿದ್ದುದನ್ನು, ತಮ್ಮ ಮೂಲ ಸಂಬಂಧವನ್ನು ಗೌರವಿಸಿರುವುದನ್ನು ನೋಡಬಹುದು. ಇಂತಹ ಉದಾಹರಣೆಗಳು ಕಡಿಮೆ ಇರುವುದಾದರೂ ಅವುಗಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆ ಚರಿತ್ರೆಯ ಕಾಲಘಟ್ಟದಲ್ಲಿ ಮನುಷ್ಯ ಸಂಬಂಧಕ್ಕೆ ಬೆಲೆಕೊಟ್ಟಿರುವ ಸಂಕುಲವೊಂದು ಕೊಡಗಿನ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದ ಕಾಂಡಂಡ ಮನೆತನ. ಈ ಕುಟುಂಬಕ್ಕೆ 200 ಎಕರೆಯಷ್ಟು ಕೃಷಿ ಜಮೀನು ಇತ್ತು. ಅವಿಭಕ್ತ ಮನೆಯ ಎರಡು ಕವಲುಗಳಲ್ಲಿ ಒಂದು ವಿಭಾಗಕ್ಕೆ ಸೇರಿದ ವ್ಯಕ್ತಿಯನ್ನು ಮತಾಂತರ ಮಾಡಿ ಶ್ರೀರಂಗಪಟ್ಟಣಕ್ಕೆ ಸಾಗಹಾಕಲಾಗಿತ್ತು. 

ಆತ ಮುಂದೆ ಟಿಪ್ಪುವಿನ ಹತ್ಯೆ ನಡೆದ ನಂತರ ಕೊಡಗಿಗೆ ಹಿಂದಿರುಗಿ ತನ್ನ ಕಾಂಡಂಡ ಕೂಡುಕುಟುಂಬಕ್ಕೆ ಹೋಗುತ್ತಾನೆ. ಅವನನ್ನು ಗೌರವದಿಂದ ಬರಮಾಡಿಕೊಂಡ ಮನೆಯವರು ಕುಟುಂಬದ ಆಸ್ತಿಯಲ್ಲಿ ಅವನ ಭಾಗಕ್ಕೆ ಸೇರಬೇಕಾದ ಅರ್ಧಾಂಶವನ್ನು ಯಾವುದೇ ತಕರಾರುಗಳಿಲ್ಲದೆ ನೀಡುತ್ತಾರೆ. ಆದರೆ ಮತಾಂತರಗೊಂಡಿದ್ದ ವ್ಯಕ್ತಿ ಮುಸ್ಲಿಮ್ ಆಗಿಯೇ ಮುಂದುವರಿಯುತ್ತಾನೆ. ಆತ ಮತ್ತೆ ಮಾತೃ ಮತಕ್ಕೆ ಬರಲು ಅವಕಾಶ ದೊರಕಿರಲಾರದು. ಅವನ ಭಾಗದ ಕುಟುಂಬವನ್ನು ಈಗ ‘ಕನ್ನಪಣೆ’ ಎಂದು ಕರೆಯುತ್ತಾರೆ. ಕಾಂಡಂಡ ಮತ್ತು ಕನ್ನಪಣೆಯ ಮನೆತನಗಳು ಅಕ್ಕಪಕ್ಕದಲ್ಲಿ ಆಸ್ತಿಗಳನ್ನು ಹೊಂದಿವೆ. ಈಗಲೂ ಸೌಹಾರ್ದದಿಂದ ಬದುಕುತ್ತಿದ್ದಾರೆ.

 ದೇವಟಿಪರಂಬುವಿನ ಘಟನೆಯಲ್ಲಿ ಟಿಪ್ಪು ಮತಾಂತರ ನಡೆಸಿದ ಜನರ ಸಂಖ್ಯೆಯನ್ನು ವಿಭಿನ್ನ ಲೇಖಕರು ಬೇರೆ ಬೇರೆಯಾಗಿ ತೋರಿಸಿದ್ದಾರೆ. ಈ ವಿವರಗಳನ್ನು ವಿಜಯ್ ಪೂಣಚ್ಚ ತಂಬಂಡ ಸಮಗ್ರವಾಗಿ ನೀಡಿದ್ದಾರೆ. ಈ ಸಂಖ್ಯೆಯು ದೊಡ್ಡ ವೀರರಾಜೇಂದ್ರ ಒಡೆಯ ಬರೆಸಿದ ರಾಜೇಂದ್ರನಾಮೆಯಲ್ಲಿ ಒಂದೆಡೆ 1,11,000 ಆಗಿದ್ದರೆ ಇನ್ನೊಂದು ಕಡೆ 64,000 ಎಂದಿದೆ. 1817ರಲ್ಲಿ ಕೊಡಗನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಲೆಫ್ಟಿನೆಂಟ್ ಕಾನ್ನರ್ 5,000 ಕೊಡಗರನ್ನು ಅವರ ಕುಟುಂಬ ಸಮೇತರಾಗಿ ಮತಾಂತರ ಮಾಡಿದ ಬಗ್ಗೆ ಬರೆಯುತ್ತಾನೆ. 

ಅಲ್ಲದೆ ಇತಿಹಾಸಕಾರರೊಬ್ಬರು ಈ ಸಂಖ್ಯೆಯನ್ನು 12,000 ಎಂಬುದಾಗಿ ಹೇಳುತ್ತಾರೆ ಎಂದು ಸಹ ದಾಖಲಿಸಿದ್ದಾನೆ. ಇನ್ನು ಮಿಶನರಿ ಬರಹಗಾರರು ಹಾಗೂ ದೇಸಿ ವಿದ್ವಾಂಸರು 70,000ದಿಂದ ಒಂದು ಲಕ್ಷದ ಲೆಕ್ಕವನ್ನು ನೀಡಿದ್ದಾರೆ. ಟಿಪ್ಪುವಿನ ಚರಿತ್ರೆಕಾರನಾದ ಕಿರ್ಮಾನಿಯು ಮತಾಂತರಗೊಂಡವರು 80,000 ಎಂದು ಬರೆದಿದ್ದು, ಮುಂದಿನ ಪುಟದಲ್ಲಿ 8,000 ಅನ್ನುತ್ತಾನೆ. 1810 ಹಾಗೂ 1817ರಲ್ಲಿ ಹಿಸ್ಟರಿ ಆಫ್ ಮೈಸೂರ್ ಸಂಪುಟಗಳನ್ನು ಪ್ರಕಟಿಸಿದ ಕರ್ನಲ್ ಮಾರ್ಕ್ ವಿಲ್ಕ್ಸ್ ಈ ಸಂಖ್ಯೆ 70,000 ಎಂದು ಹೇಳುತ್ತಾನೆ. (ವಿಜಯ್ ಪೂಣಚ್ಚ ತಂಬಂಡ, 2018, ರಾಜೇಂದ್ರನಾಮೆ: ಮರು ಓದು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ; ವಿಜಯ್ ಪೂಣಚ್ಚ ತಂಬಂಡ, 2022, ಅಮರ ಸುಳ್ಯ ಸಂಗ್ರಾಮ 2022, ಕನ್ನಡ ವಿಶ್ವವಿದ್ಯಾಲಯ, ಹಂಪಿ).

ದೊಡ್ಡ ವೀರರಾಜನು ಪಿರಿಯಾಪಟ್ಟಣದಲ್ಲಿ ಬಂದಿಯಾಗಿದ್ದ ಸಂದರ್ಭದಲ್ಲಿ ಟಿಪ್ಪುವಿನ ಅಧಿಕಾರಿ ಖಾದರ್‌ಖಾನ್ ಕೈಸಗಿಯು ವೀರರಾಜನನ್ನು ಪ್ರೀತಿಯಿಂದ ನೋಡಿಕೊಂಡಿದ್ದ. ಅಲ ಖಾದರ್‌ಖಾನ್ ಕೈಸಗಿ ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತಾನೆ. ಮುಂದೆ ವೀರರಾಜನು ಅವನಿಗೆ ಆಭಾರಿಯಾದ ಘಟನೆ ನಡೆಯುತ್ತದೆ. 

ಅದು ದೊಡ್ಡ ವೀರರಾಜ ಕೊಡಗು ಸಾಮ್ರಾಜ್ಯದ ಮರುಸ್ಥಾಪನೆಯ ಪ್ರಯತ್ನದಲ್ಲಿದ್ದ ಸಮಯ.ಖಾದರ್‌ಖಾನ್ ಕೈಸಗಿ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದ ಟಿಪ್ಪುವಿನ ಸೈನ್ಯದ ಮುಖ್ಯಸ್ಥನಾಗಿದ್ದನು. ಆಗ ವೀರರಾಜನಸೈನ್ಯ ಸುತ್ತಲೂ ಮುತ್ತಿಕೊಳ್ಳುತ್ತದೆ. ಕೈಸಗಿ ಪಡೆಯ ಆಹಾರಸಾಮಗ್ರಿಗಳ ದಾಸ್ತಾನು ಮುಗಿದುಹೋಗಿ ಸೇನಾಳುಗಳಸ್ಥಿತಿ ದಯನೀಯವಾಗುತ್ತದೆ. ಕೈಸಗಿ ಅಸಹಾಯಕನಾಗಿ ಕಂಗೆಡುತ್ತಾನೆ. 

ಮಡಿಕೇರಿಯನ್ನು ಮತ್ತೆ ಪಡೆಯಲುಹೊಂಚುಹಾಕುತ್ತಿದ್ದ ವೀರರಾಜನಿಗೆ ಅನಿವಾರ್ಯವಾಗಿ ಆತ ಶರಣಾಗುತ್ತಾನೆ. ಆಗ ವೀರರಾಜನು ಕೈಸಗಿಯನ್ನು ಗೌರವಯುತವಾಗಿ ಕ್ಷಮಿಸುತ್ತಾನೆ. ಆದರೆ, ವೀರರಾಜನು ಟಿಪ್ಪು ಅಂತಃಪುರದಲ್ಲಿದ್ದ ತನ್ನ ಸಹೋದರಿಯರಗೌರವ ಮತ್ತು ಮಾನವನ್ನು ಕಾಪಾಡುವ ದೂರದೃಷ್ಟಿಯಿಂದ ಕೈಸಗಿಯನ್ನು ಕ್ಷಮಿಸಿದನೇ ಹೊರತು ಇನ್ಯಾವು