ಹುಬ್ಬಳ್ಳಿ | ದೇವಸ್ಥಾನದ ಅಡುಗೆ ಮನೆಯಲ್ಲಿ ಅನಿಲ ಸೋರಿಕೆ: ಮಗು ಸೇರಿ ಇಬ್ಬರಿಗೆ ಗಾಯ
Update: 2023-01-03 14:15 GMT
ಹುಬ್ಬಳ್ಳಿ, ಜ.3: ಅಡುಗೆ ಅನಿಲ ಸೋರಿಕೆಯಿಂದಾಗಿ ಅಗ್ನಿ ಅವಘಡ ಸಂಭವಿಸಿ ಮಗು ಸೇರಿ ಇಬ್ಬರು ಗಾಯಗೊಂಡ ಘಟನೆ ಇಲ್ಲಿನ ವೀರಾಪೂರ ಓಣಿಯ ಶ್ರೀ ಗಣಪತಿ ಈಶ್ವರ ದೇವಸ್ಥಾನದಲ್ಲಿ ಮಂಗಳವಾರ ವರದಿಯಾಗಿದೆ.
ನಗರದ ವೀರಪೂರ ಓಣಿಯಲ್ಲಿನ ಗಣಪತಿ ದೇವಸ್ಥಾನದ ಅಡುಗೆ ಕೊಠಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮಗು ಹಾಗೂ ಓರ್ವ ಮಹಿಳೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಮಗುವನ್ನು ಹುಬ್ಬಳ್ಳಿಯ ಎಸ್.ಡಿ.ಎಂ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಮಹಿಳೆಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಗುವಿನ ದೇಹವು ಶೇ.60ರಷ್ಟು ಸುಟ್ಟಿದೆ ಎಂದು ಹೇಳಲಾಗಿದೆ.
ಮಗು ಹಾಗೂ ಇಬ್ಬರು ಮಹಿಳೆಯರು ದೇವರ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.