ಬಿಜೆಪಿಯಲ್ಲಿ ಯಡಿಯೂರಪ್ಪ ಈಗ ಮೂಲೆಗುಂಪು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

''ಮಂಡ್ಯ ಸಮಾವೇಶಕ್ಕೆ ವಿಜಯೇಂದ್ರ ಅವರನ್ನೂ ಬಿಜೆಪಿ ಆಹ್ವಾನಿಸಿಲ್ಲ''

Update: 2023-01-03 17:12 GMT

ಮೈಸೂರು: 'ಅಮಿತ್ ಶಾ ನೇತೃತ್ವದಲ್ಲಿ ಮಂಡ್ಯದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಯಡಿಯೂರಪ್ಪ ಅವರನ್ನು ಯಾಕೆ ಆಹ್ವಾನಿಸಲಿಲ್ಲ' ಎಂಬುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.

ಯಡಿಯೂರಪ್ಪ ಅವರನ್ನು ಈಗ ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಲಾಗಿದೆ. ಅವರು ಮಂಡ್ಯ ಕಾರ್ಯಕ್ರಮಕ್ಕೆ ಬರಬಾರದು ಎಂದು ಬಿ.ಎಲ್.ಸಂತೋಷ್ ಸೂಚನೆ ಮೇರೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಕಡೆಗಣಿಸಲಾಗಿದೆ.ಯಡಿಯೂರಪ್ಪ ಅವರಿಂದಲೇ ಬಿಜೆಪಿ ಅನ್ನುವುದ ಬೇಡ ಅವರನ್ನು ಬಿಟ್ಟು ನಾವು ಸಮಾವೇಶ ಮಾಡೋಣ ಎಂಬ ಸೂಚನೆಯೊಂದಿಗೆ ಇವರು ಯಡಿಯೂರಪ್ಪ ಅವರನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಅವರನ್ನು ಗನ್ ಪಾಯಿಂಟ್‍ನಲ್ಲಿ ಇಟ್ಟು ನಡೆಸಿಕೊಳ್ಳಲಾಗುತ್ತಿದೆ. ಈಡಿ , ಐಟಿ ಅಧಿಕಾರಿಗಳನ್ನು ಇವರ ಹಿಂದೆ ಬಿಡಲಾಗಿದೆ. ಮೊದಲು ಒಂದು ಬಾರಿ ಭೇಟಿ ಮಾಡಿ ಯಡಿಯೂರಪ್ಪ ಅವರಿಗೆ ಸಲಾಂ ಹೊಡೆಯುತ್ತಿದ್ದ ಅಧಿಕಾರಿಗಳು ಈಗ ಮೂರು ಬಾರಿ ಬೇಟಿ ಮಾಡಿ ಸಲಾಂ ಹೊಡೆಯುತ್ತಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಅವರನ್ನು ಹೆದರಿಸುವ ಕೆಲಸವನ್ನು ಕೇಂದ್ರದ ನಾಯಕರು ಮಾಡುತ್ತಿದ್ದಾರೆ ಎಂದು ಹೇಳಿದರು.

Similar News