ಕೇರಳದಲ್ಲಿ ರಸ್ತೆ ಅಪಘಾತ: ಶಬರಿಮಲೆಗೆ ತೆರಳಿದ್ದ ಧಾರವಾಡದ ಬಾಲಕ ಮೃತ್ಯು, ಮೂವರು ಗಂಭೀರ

Update: 2023-01-04 10:46 GMT

ಧಾರವಾಡ, ಜ.4: ಶಬರಿಮಲೆ ಯಾತ್ರೆ ತೆರಳಿ ಹಿಂದಿರುಗುತ್ತಿದ್ದ ಧಾರವಾಡದ ತಂಡವಿದ್ದ ವಾಹನ ಕೇರಳದಲ್ಲಿ ಅಪಘಾತಕ್ಕೀಡಾಗಿದ್ದರಿಂದ 10 ವರ್ಷದ ಬಾಲಕನೋರ್ವ ಮೃತಪಟ್ಟು, ಮೂವರು ತೀವ್ರ ಗಾಯಗೊಂಡ ಘಟನೆ ವರದಿಯಾಗಿದೆ.

ಧಾರವಾಡ ಸೈದಾಪುರದ ಸುಮಿತ್ ಪಾಂಡೆ(10) ಮೃತಪಟ್ಟ ಬಾಲಕ. ಸೂರಜ್ ಪಾಂಡೆ, ನಿಖಿಲ್ ಪಾಂಡೆ ಹಾಗೂ ಸುಶಾಂತ ಪಾಂಡೆ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇವರು ಜ.1ರಂದು ಸೈದಾಪುರದಿಂದ ಶಬರಿಮಲೆಗೆ ತೆಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕೇರಳದ ಮಣಪ್ಪುರಂ ಜಿಲ್ಲೆಯ ಯಡಪ್ಪಾಲ ಎಂಬಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಇದರಿಂದ ಸುಮಿತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Similar News