ಹುಬ್ಬಳ್ಳಿ: ಯುವಕನಿಗೆ ಚೂರಿ ಇರಿತ

Update: 2023-01-04 16:13 GMT

ಹುಬ್ಬಳ್ಳಿ,: ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ಹುಬ್ಬಳ್ಳಿ ನಗರದ ಆನಂದ ನಗರದ  ಬಳಿ ಬುಧವಾರ ವರದಿಯಾಗಿದೆ. 

ತೌಸೀಫ್ ಸಗೀರ್ ಅಹ್ಮದ್ ಮುಲ್ಲಾ (32) ಎಂಬಾತನೇ ಚೂರಿ ಇರಿತಕ್ಕೊಳಗಾದ ಯುವಕನಾಗಿದ್ದು,   ಗಂಭೀರವಾಗಿ ಗಾಯಗೊಂಡಿದ್ದ  ಆತನನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.  ವಿಶಾಲ್ ಹಾಗೂ ಪ್ರಮೋದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. 

ತೌಸೀಫ್ ಸಗೀರ್ ವಿಶಾಲ್ ಹಾಗೂ ಪ್ರಮೋದ್ ಗೆ ಹಣ ಕೊಡಬೇಕಾಗಿತ್ತು. ಇದೇ ವಿಚಾರವಾಗಿ ತೌಸೀಫ್ ಗೆ ವಿಶಾಲ್ ಹಾಗೂ ಪ್ರಮೋದ್ ಚೂರಿ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. 

ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Similar News