ಚಾಮರಾಜನಗರ | ವಾಮಾಚಾರಕ್ಕೆ ಸಾಗಿಸುತ್ತಿದ್ದ ಜೀವಂತ ಗೂಬೆಯ ರಕ್ಷಣೆ: ಇಬ್ಬರ ಬಂಧನ
Update: 2023-01-10 04:35 GMT
ಚಾಮರಾಜನಗರ, ಜ.10: ವಾಮಾಚಾರಿಯೊಬ್ಬನಿಗೆ ನೀಡುವುದಕ್ಕಾಗಿ ಜೀವಂತ ಗೂಬೆ(Owl)ಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಹೊನ್ನೇನೆಹಳ್ಳಿ ಗ್ರಾಮದ ನಿವಾಸಿ ಪುಟ್ಟರಾಜು ಹಾಗೂ ಯಡಹಳ್ಳಿ ಗ್ರಾಮದ ಹರೀಶ್ ಬಂಧಿತ ಆರೋಪಿಗಳು.
ಕೊಳ್ಳೇಗಾಲ ತಾಲೂಕಿನ ಜಾಗೇರಿ ಬಳಿ ಗೂಬೆ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಅರಣ್ಯ ಸಂಚಾರಿ ದಳದ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರ ಬಳಿಯಿಂದ ಜೀವಂತ ಗೂಬೆಯನ್ನು ರಕ್ಷಿಸಲಾಗಿದೆ. ಆರೋಪಿಗಳನ್ನು ಗೂಬೆಯನ್ನು ಮಾಟ ಮಂತ್ರ ಮಾಡುವ ವಾಮಾಚಾರಿಯೊಬ್ಬನಿಗೆ ನೀಡಲು ಕೊಂಡೊಯ್ಯುತ್ತಿದ್ದರೆನ್ನಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಜತೆ ಬೆಂಗಳೂರು ಇನ್ಸ್ ಪೆಕ್ಟರ್?