VIDEO - ಸ್ಯಾಂಟ್ರೋ ರವಿ ಆಸ್ತಿ ಜಪ್ತಿಗೆ ಸೂಚನೆ: ಸಿಎಂ ಬೊಮ್ಮಾಯಿ

Update: 2023-01-10 07:48 GMT

ಹುಬ್ಬಳ್ಳಿ, ಜ.10: '20 ವರ್ಷದಲ್ಲಿ ಸ್ಯಾಂಟ್ರೋ ರವಿಗೆ ಯಾರ ಯಾರ ಜೊತೆ ಸಂಬಂಧವಿದೆ, ಯಾರಿದ್ದಾರೆ ಕಾದು ನೋಡಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಈ ಬಗ್ಗೆ ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾರು ಏನೇ ಹೇಳಿದ್ರು ತನಿಖೆಯಲ್ಲಿ ಸಂಪೂರ್ಣವಾಗಿ ಮಾಹಿತಿ ಬರುತ್ತೆ. 20 ವರ್ಷದಲ್ಲಿ ಯಾರ ಯಾರ ರವಿಗೆ ಸಂಬಂಧವಿದೆ‌. ಈ ಬಗ್ಗೆ ತನಿಖೆಯಾಗಲಿ ಎಂದೇ ನಾನು ಹೇಳಿದ್ದೆನೆ. ಯಾರಿದ್ದಾರೆ ಕಾದೂ ನೋಡಿ. ಈಗಾಗಲೇ ಸ್ಯಾಂಟ್ರೋ ರವಿ ಆಸ್ತಿ ಜಪ್ತಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, 'ಪ್ರತಿಯೊಬ್ಬ ರಾಜಕಾರಣಿಗಳನ್ನು ಜನ ನೋಡತ್ತಾರೆ. ಜನರೇ ತೀರ್ಮಾನ ಮಾಡತ್ತಾರೆ' ಎಂದು ಹೇಳಿದರು

Full View

Similar News