PayCM ಮುಗಿದು ಹೋದ ಕಥೆ: ಸಿಎಂ ಬೊಮ್ಮಾಯಿ

Update: 2023-01-10 10:38 GMT

ಹುಬ್ಬಳ್ಳಿ: 'PayCM ಮುಗಿದು ಹೋದ ಕಥೆ, ಅದಕ್ಕೆಲ್ಲ ಜನರಿಂದ ಸ್ಪಂದನೆ, ಬೆಂಬಲ ಸಿಗುವುದಿಲ್ಲ. ಜನರಿಗೆ ಸತ್ಯ ಯಾವುದೆಂದು ತಿಳಿದಿದೆ' ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸ್ಯಾಂಟ್ರೋ ರವಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜೈಲಿನಿಂದ ಬಿಡುಗಡೆ ಯಾಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರೇ ಉತ್ತರ ನೀಡಬೇಕು' ಎಂದರು.

ಸಿದ್ದರಾಮಯ್ಯ ಅವರು  ಕೋಲಾರ ದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಅದು ಅವರ ಆಯ್ಕೆ. ಪ್ರತಿ ರಾಜಕಾರಣಿ, ನಾಯಕನ ನಡೆ ಚುನಾವಣೆಯಲ್ಲಿ ತಿಳಿಯುತ್ತದೆ. ನಮ್ಮ ನಡೆ, ನಿಲುವು, ನಿರ್ಧಾರಗಳನ್ನು ಚುನಾವಣೆ ಓರೆಗೆ ಹಚ್ಚುತ್ತದೆ. ಕೋಲಾರ ಆಯ್ಕೆ ಬಗ್ಗೆ  ವ್ಯಾಖ್ಯಾನಿಸುವುದಿಲ್ಲ. ಇದು ಅವರ ಹಾಗೂ ಅವರ ಪಕ್ಷದ ನಿರ್ಧಾರ. ಈ ಬಗ್ಗೆ ಕೋಲಾರದ ಜನತೆ ತೀರ್ಮಾನ ಮಾಡಲಿದ್ದಾರೆ' ಎಂದರು. 

Full View

Similar News