ಗೃಹ ಇಲಾಖೆಯೇ ಸಾಂಟ್ರೊ ರವಿಯ ಕೈಯೊಳಗಿದೆ: ಕಾಂಗ್ರೆಸ್ ಟೀಕೆ
Update: 2023-01-11 11:12 IST
ಬೆಂಗಳೂರು: ಪೊಲೀಸರು ಸಾಂಟ್ರೊ ರವಿಯನ್ನು ಇನ್ನೂ ಬಂಧಿಸಿಲ್ಲ. ಗೃಹ ಇಲಾಖೆಯೇ ಆತನ ಕೈಯೊಳಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಹುತೇಕ ಪೊಲೀಸರು ಆತನ ವರ್ಗಾವಣೆ ಋಣದಲ್ಲಿದ್ದಾರೆ. ಸಿಎಂ, ಸಿಎಂ ಪುತ್ರ, ಗೃಹಸಚಿವರೇ ಆತನ ಜೇಬಲ್ಲಿದ್ದಾರೆ. ಆತನನ್ನು ಇನ್ನೂ ಬಂಧಿಸಲಾಗಿಲ್ಲ. ಸಿಎಂಗಿಂತಲೂ ಪ್ರಭಾವಿಯಾದವನ ತನಿಖೆ ಪೊಲೀಸರಿಂದ ಸಾಧ್ಯವೇ? ಎಂದು ಪ್ರಶ್ನಿಸಿದೆ.
ಸ್ಯಾಂಟ್ರೋ ರವಿಯ ತನಿಖೆ ಮಾಡುತ್ತೇವೆ ಎಂದ @BSBommai ಅವರದ್ದು ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ!
— Karnataka Congress (@INCKarnataka) January 11, 2023
ಗೃಹ ಇಲಾಖೆಯೇ ಆತನ ಕೈಯ್ಯೊಳಗಿದೆ.
ಬಹುತೇಕ ಪೊಲೀಸರು ಆತನ ವರ್ಗಾವಣೆ ಋಣದಲ್ಲಿದ್ದಾರೆ.
ಸಿಎಂ, ಸಿಎಂ ಪುತ್ರ, ಗೃಹಸಚಿವರೇ ಆತನ ಜೇಬಲ್ಲಿದ್ದಾರೆ.
ಆತನನ್ನ ಇನ್ನೂ ಬಂಧಿಸಲಾಗಿಲ್ಲ
ಸಿಎಂಗಿಂತಲೂ ಪ್ರಭಾವಿಯಾದವನ ತನಿಖೆ ಪೊಲೀಸರಿಂದ ಸಾಧ್ಯವೇ?