ಸಾಗರ: ಶರಾವತಿ ಹಿನ್ನೀರಿನಲ್ಲಿ ಯುವಕ ನೀರು ಪಾಲು
Update: 2023-01-13 10:47 GMT
ಸಾಗರ, ಜ.13 : ಶರಾವತಿ ನದಿ ಹಿನ್ನೀರಿನಲ್ಲಿ ಯುವಕನೋರ್ವ ನೀರು ಪಾಲಾಗಿರುವ ಘಟನೆ ವರದಿಯಾಗಿದೆ.
ಜೋಗದ ನಿವಾಸಿ ವಿನೋದ್ ಕುಮಾರ್ (33), ವರ್ಷ ಮೃತ ಯುವಕನಾಗಿದ್ದು, ಸಾಗರದ ಮುಪ್ಪಾಣಿ ರಂಗೋಲಿ ಕೋಣೆಯಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ವಿನೋದ್ ಕುಮಾರ್ ಇತರ ಎಂಟು ಮಂದಿ ಸ್ನೇಹಿತರ ಜತೆ ಶರಾವತಿ ಹಿನ್ನೀರಿನಲ್ಲಿ ಗೆಳೆಯನೊಬ್ಬನ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದರೆನ್ನಲಾಗಿದ್ದು, ಆಗ ಹಿನ್ನೀರಿನಲ್ಲಿ ಸಂಭವಿಸಿದ ದುರಂತದಲ್ಲಿ ವಿನೋದ್ ಕುಮಾರ್ ಮೃತಪಟ್ಟಿದ್ದಾರೆ.
ಶುಕ್ರವಾರ ಸೊರಬ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆದು ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.