ಶಿವಮೊಗ್ಗ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ
Update: 2023-01-13 11:50 GMT
ಶಿವಮೊಗ್ಗ, ಜ.13: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ನಗರದ ಮಿಳ್ಳಘಟ್ಟದಲ್ಲಿ ನಡೆದಿದೆ.
ಮಿಳ್ಳಘಟ್ಟದ ಪರಂದಯ್ಯ(70), ಇವರ ಪತ್ನಿ ದಾನಮ್ಮ(61) ಮತ್ತು ಪುತ್ರ ಮಂಜುನಾಥ್ (25) ಮೃತ ದುರ್ದೈವಿಗಳು.
ಹೊಸಪೇಟೆಯಲ್ಲಿ ನೆಲೆಸಿದ್ದ ಈ ಕುಟುಂಬ 4 ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಬಂದು ಅಲ್ಲೇ ನೆಲಸಿದ್ದರು. ಸಾಲಭಾದೆ ಮತ್ತು ಬಡತನದಿಂದಾಗಿ ಮನ ನೊಂದು ಬುಧವಾರ ರಾತ್ರಿ ಊಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗುರುವಾರ ಸಂಜೆ ಸಂಬಂಧಿಕರು ಮನೆಗೆ ಹೋಗಿ ನೋಡಿದಾಗ ದಂಪತಿ ಮೃತಪಟ್ಟಿದ್ದು, ಮಂಜುನಾಥ ಅಸ್ವಸ್ಥಗೊಂಡಿರುವುದು ಬೆಳಕಿಗೆ ಬಂದಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಮಂಜುನಾಥನನ್ನು ಆಸ್ಪತ್ರೆಗೆ ತಕ್ಷಣ ಸಾಗಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಆತ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ದೊಡ್ಡಪೆಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.