ಗೃಹ ಸಚಿವರ ಗುಜರಾತ್ ಭೇಟಿಗೂ ಸ್ಯಾಂಟ್ರೊ ರವಿ ಬಂಧನಕ್ಕೂ ಸಂಬಂಧ ಇಲ್ಲ: ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ
Update: 2023-01-13 14:55 GMT
ಮೈಸೂರು: ಗೃಹ ಸಚಿವರ ಗುಜರಾತ್ ಭೇಟಿಗೂ ಸ್ಯಾಂಟ್ರೊ ರವಿ ಬಂಧನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
ಸ್ಯಾಂಟ್ರೊ ರವಿ ಗುಜರಾತ್ ನಲ್ಲಿ ಬಂಧನದ ಬೆನ್ನಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗುಜರಾತ್ ಗೆ ಭೇಟಿ ನೀಡಿದ್ದರ ಬಗ್ಗೆ ಊಹಾ ಪೋಹಗಳು ಸೃಷ್ಟಿಯಾಗಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್ ಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಫೋರೆನಿಕ್ಸ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಜ.12 ರ ಗುರುವಾರ ತೆರಳಿ ಸಂಜೆ ಗುಜರಾತ್ ನಿಂದ ವಾಪಸ್ ಆಗಿದ್ದಾರೆ. ಸ್ಯಾಂಟ್ರೊ ರವಿ ಜ.13 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗುಜರಾತ್ ಗೆ ಎಂಟ್ರಿಯಾಗಿದ್ದಾನೆ. ಹಾಗಾಗಿ ಈ ವಿಚಾರವನ್ನು ತಳುಕುಹಾಕುವ ಅಗತ್ಯವಿಲ್ಲ ಎಂದು ಹೇಳಿದರು.