ನಡೆದಾಡುವ ಸರಕಾರ ತಂದಿರುವ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ: ಬಿ.ವೈ ವಿಜಯೇಂದ್ರ

Update: 2023-01-15 16:09 GMT

ತುಮಕೂರು: 'ಡಾ.ಶಿವಕುಮಾರ ಶ್ರೀಗಳನ್ನು ನಡೆದಾಡುವ ದೇವರೆಂದು ಪೂಜಿಸುತ್ತೇವೆ. ಅದೇ ರೀತಿ ನಡೆದಾಡುವ ಸರ್ಕಾರ ತಂದಿರುವ ಕೀರ್ತಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ' ಎಂದು  ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಇಂದು ನಡೆದ ಶ್ರೀ ಗುರು ಸಿದ್ದರಾಮೇಶ್ವರ ‌ಜಯಂತ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  'ಯಡಿಯೂರಪ್ಪ  ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಹಾಗಿದ್ದರೂ ಅವರಿಗೆ ಕೋಟ್ಯಂತರ ಜನರು ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನ ಕೊಟ್ಟಿದ್ದಾರೆ' ಎಂದು ಹೇಳಿದರು. 

'ನಮ್ಮ ತಂದೆಯವರ ಆಶಯದಂತೆ ಭವಿಷ್ಯದಲ್ಲಿ ನನಗೂ ಸಹ ರಾಜಕೀಯ ಆಶೀರ್ವಾದ ಅಗತ್ಯವಿದೆ. ಸಮಯ ಬಂದಾಗ ತಾವೂ ನಮ್ಮ ಕೈಹಿಡಿಯ ಬೇಕು' ಎಂದು ತಿಳಿಸಿದರು.

Similar News