ಪಿಎಸ್ಐ ಹಗರಣದ ಆರೋಪಿ ಆರ್.ಡಿ. ಪಾಟೀಲ್ ಒಬ್ಬ ಬುದ್ಧಿವಂತ ಕ್ರಿಮಿನಲ್: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2023-01-25 15:18 GMT

ಶಿವಮೊಗ್ಗ:   ಪಿಎಸ್ಐ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಒಬ್ಬ ಎಲ್ಲಾ ರೀತಿಯ ಬುದ್ಧಿವಂತ ಕ್ರಿಮಿನಲ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಡಿ ಪಾಟೀಲ್ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವಂತಹ ವ್ಯಕ್ತಿ. ಈತನನ್ನು ನಮ್ಮ ಪೊಲೀಸರು ಹಿಡಿಯಲು ಕಷ್ಟಪಟ್ಟಿದ್ದಾರೆ. ಮತ್ತೆ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದ ಎಂದರು. ಆರ್.ಡಿ. ಪಾಟೀಲ್ ನಮ್ಮ ಪಕ್ಷದವನಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ, ಆತ ಜಿ.ಪಂ. ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ಎಂಬ  ದಾಖಲೆ ಸಿಕ್ಕಿದೆ. ಅವನಿಗೆ ರಕ್ಷಣೆ ನೀಡಲು ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ ಇದು ಯಾಕೆ ಎಂದು ಗೊತ್ತಾಗಬೇಕಿದೆ ಎಂದರು.

'ಈ ಬಗ್ಗೆ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಅವನಿಗೆ ಬೇಲ್ ಸಿಕ್ಕಿತ್ತು, ಈಗ ಮತ್ತೆ ಕ್ಯಾನ್ಸಲ್ ಆಗಿದೆ.ಈಗ ಮತ್ತೆ ಆತ ಜೈಲಿಗೆ ಹೋಗಿದ್ದಾನೆ. ಆತ ಬುದ್ಧಿವಂತನಾಗಿದ್ದಕ್ಕೆ ಪೊಲೀಸರನ್ನು ತಳ್ಳಿಕೊಂಡು ಓಡಿ ಹೋಗಿದ್ದ. ನಮ್ಮ ಸರ್ಕಾರ ಆತನನ್ನು ಅರೆಸ್ಟ್ ಮಾಡುವ ಕೆಲಸ ಮಾಡಿದೆ' ಎಂದರು.

'ಇನ್ನೂ ಸ್ಯಾಂಟ್ರೋ ರವಿಗೆ ಸಿಓಡಿ ಪೊಲೀಸರು ಅಗತ್ಯ ಬಿದ್ದಾಗ ವಶಕ್ಕೆ ಪಡೆಯುತ್ತಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ' ಎಂದರು

Similar News