ಹಾಸನ: ತನ್ನದೇ ಪಕ್ಷದ ಕಾರ್ಯಕರ್ತನಿಗೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಬಿಜೆಪಿ ಮುಖಂಡ

Update: 2023-01-25 18:13 GMT

ಹಾಸನ: ಬಿಜೆಪಿ ಕಾರ್ಯಕರ್ತ ಓರ್ವನ ಮೇಲೆ ಅದೇ ಪಕ್ಷದ ಮುಖಂಡಬನೋರ್ವ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ನಗರಸಭೆ ಎದುರು ನಡೆದಿದೆ.

ಸವಿತಾ ಸಮಾಜ ಮುಖಂಡ ಹಾಗೂ ಬಿಜೆಪಿಯ ಕಾರ್ಯಕರ್ತ ಅರುಣ್ ಕುಮಾರ್  ಮೇಲೆ  ಬಿಜೆಪಿಯ ಮುಖಂಡ ಅಣ್ಣನಾಯಕನಹಳ್ಳಿ ವಿಜಯ್  ಕುಮಾರ್  ಹಾಗೂ ಇನ್ನೋರ್ವ ವ್ಯಕ್ತಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಬಿಜೆಪಿಯ ಬೂತ್ ವಿಜಯ ಅಭಿಯಾನದಲ್ಲಿ ಗ್ರಾಮಗಳಿಗೆ ತೆರಳಿದ್ದ ವೇಳೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಹಲ್ಲೆ ನಡೆಸುವ ವಿಡಿಯೋ ವೈರಲ್ ಆಗಿದೆ. 

ಪ್ರಕರಣಕ್ಕೆ ಸಂಬಂದಿಸಿದಂತೆ ಬಿಜೆಪಿಯ ಮುಖಂಡ ಅಣ್ಣನಾಯಕನಹಳ್ಳಿ ವಿಜಯ್  ಕುಮಾರ್  ರವರ ಮೇಲೆ ಕೇಸು ದಾಖಲಿಸಿ  ಬಂಧಿಸಲಾಗಿದೆ.

Full View

Similar News