ಮೋದಿ ಪ್ರಧಾನಿಯಾಗಿರುವುದರಿಂದಲೇ ನನಗೆ 'ಪದ್ಮಭೂಷಣ​' ಬಂದಿದೆ: ಸಾಹಿತಿ ಎಸ್.ಎಲ್.ಭೈರಪ್ಪ

Update: 2023-01-26 11:10 GMT

ಮೈಸೂರು: 'ಮೋದಿ ಅವರು ಪ್ರಧಾನಿ ಆಗಿರುವುದರಿಂದಲೇ ನನಗೆ ಈ ಪ್ರಶಸ್ತಿ (ಪದ್ಮಭೂಷಣ) ಬಂದಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ' ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅವರು ಹೇಳಿದ್ದಾರೆ. 

ಗುರುವಾರ ಮೈಸೂರಿನ ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಎಲ್.ಭೈರಪ್ಪ ಅವರು, 'ಈ ಪ್ರಶಸ್ತಿಗಳು ಬರುತ್ತವೆ, ಹೋಗುತ್ತವೆ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ಅದೇ ದೊಡ್ಡ ಪ್ರಶಸ್ತಿ' ಎಂದು ಹೇಳಿದರು. 

'ಕುಮಾರವ್ಯಾಸ ಕೃತಿ ಬರೆದು 500 ವರ್ಷಗಳಾಗಿದೆ. ಆದೂ ಇಂದೂ ಜನ ಕುಮಾರವ್ಯಾಸಭಾರತ ವನ್ನು ಓದುತ್ತಿದ್ದಾರೆ. ಅಂತಹ ಕೃತಿ ನನ್ನ ಲೇಖನದಲ್ಲೂ ಇದ್ದರೆ ಅಷ್ಟೇ ಸಾಕು' ಎಂದು ಹೇಳಿದರು.

ಬುಧವಾರ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದ್ದು, ರಾಜ್ಯದ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ಒಲಿದಿದೆ. 

ಇದನ್ನೂ ಓದಿಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬೀದರ್ ನ ಶಾ ರಶೀದ್‌ ಅಹ್ಮದ್‌ ಖಾದ್ರಿ ಯಾರು? ಅವರ ಸಾಧನೆ ಏನು?

Similar News