'ಮಂಡ್ಯ ಬಿಟ್ಟು ಹೋಗಿ': ಬಿಜೆಪಿಗರಿಂದಲೇ ‘GO BACK​ ಆರ್​.ಅಶೋಕ್’​ ಅಭಿಯಾನ

Update: 2023-02-10 08:47 GMT

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಲಾಗಿದ್ದು, ಸಚಿವರ ಬದಲಾವಣೆಗೆ ಇದೀಗ ಜಿಲ್ಲೆಯ ಬಿಜೆಪಿ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದೆ.

ಸಚಿವ ಗೋಪಾಲಯ್ಯ ಅವರನ್ನ ಬದಲಿಸಿ  ಆರ್.ಅಶೋಕ್ ಅವರಿಗೆ ಮಂಡ್ಯ ಉಸ್ತುವಾರಿಯನ್ನು ನೀಡಲಾಗಿದೆ. ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಅಲ್ಲದೇ, ಜಿಲ್ಲೆಯವರೇ ಆದ ನಾರಾಯಣ ಗೌಡ ಅವರನ್ನ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಕೆಲವು ಬಿಜೆಪಿ ಮುಖಡರು ಒತ್ತಾಯಿಸಿದ್ದಾರೆ. 

ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಮದ್ದೂರು, ನಾಗಮಂಗಲ ಮುಂತಾದ ಕಡೆಗಳಲ್ಲಿ ‘ಗೋ ಬ್ಯಾಕ್ ಅಶೋಕ್’, ‘ಬಾಯ್‍ಕಾಟ್ ಆರ್.ಅಶೋಕ್’, ‘ಮಂಡ್ಯ ಬಿಟ್ಟು ಹೋಗಿ’ ಎನ್ನುವ ಬಿಜೆಪಿ ಚಿಹ್ನೆ ಹೊಂದಿರುವ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅಶೋಕ್ ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ.

ಮಂಡ್ಯದ ವಿ.ವಿ.ರಸ್ತೆ, ಸುಭಾಷ್‍ನಗರ ಸೇರಿದಂತೆ ಪ್ರಮುಖ ಸಾರ್ವಜನಿಕರ ಸ್ಥಳಗಳ ಗೋಡೆಗಳಿಗೆ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ. ಅದೇ ರೀತಿ, ಮದ್ದೂರಿನ ಪ್ರವಾಸಿಮಂದಿರದ ಕಾಂಪೌಂಡ್, ಹೆದ್ದಾರಿಯ ಫ್ಲೈಹೋವರ್ ಸ್ಥಂಬ, ಪೊಲೀಸ್ ಚೌಕಿ, ನಾಗಮಂಗಲದ ಟ್ರಾಫಿಕ್ ಪೊಲೀಸ್ ಠಾಣೆ ತಡೆಗಟ್ಟೆ ಮುಂತಾದ ಕಡೆ ಭಿತ್ತಿಚಿತ್ರಗಳನ್ನು ಎಡೆಬಿಡದೆ ಹಾಕಲಾಗಿದೆ.

ಇದನ್ನೂ ಓದಿ: ‘ನಾಳೆ ಸ್ವಾತಂತ್ರ್ಯೋತ್ಸವ’ ಎಂದ ಅಶೋಕ್! 

Similar News