ರಾಮನಗರ: ಚಿರತೆಯಿಂದ ತಪ್ಪಿಸಿಕೊಳ್ಳಲು ಮರವೇರಿದ ಯುವತಿ; ಆಯ ತಪ್ಪಿ ಬಿದ್ದು ಗಂಭೀರ ಗಾಯ

Update: 2023-01-26 10:29 GMT

ರಾಮನಗರ, ಜ.26: ರಾಜ್ಯದ ಹಲವೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು, ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಳಿ ನಡೆಸುತ್ತಿರುವ ಪ್ರಕರಣಗಳಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವೇರಿದ್ದ ಯುವತಿಯೊಬ್ಬಳು ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ಮಾಗಡಿ ತಾಲೂಕಿನ ಮರಳುದೇವನಪುರದಲ್ಲಿ ಬುಧವಾರ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವೇರಿದ್ದ ವಿಜಯಲಕ್ಷ್ಮಿ(25) ಎಂಬ ಯುವತಿಯು ಮರದಿಂದ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆನ್ನಲಾಗಿದೆ. 

ಗ್ರಾಮದ ಜಮೀನಿನಲ್ಲಿ ಯುವತಿ ಕುರಿ ಮೇಯಿಸುತ್ತಿದ್ದ ವೇಳೆ ಚಿರತೆ ಅಲ್ಲಿ ಪ್ರತ್ಯಕ್ಷ್ಯವಾಗಿದೆ. ಇದರಿಂದ ಗಾಬರಿಗೊಂಡ ಆಕೆ ಮರವೇರಿದ್ದು, ಈ ವೇಳೆ ಆಯ ತಪ್ಪಿ ಕೆಳಗೆ ಬಿದ್ದು ಸೊಂಟದ ಮೂಳೆ ಮುರಿದುಕೊಂಡಿದ್ದಾಳೆನ್ನಲಾಗಿದೆ. ಸದ್ಯ ಯುವತಿಯು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   

ಇದನ್ನೂ ಓದಿ: ತಿ.ನರಸೀಪುರ: ಮತ್ತೊಂದು ಚಿರತೆ ಬೋನಿಗೆ, ನಿಟ್ಟುಸಿರು ಬಿಟ್ಟ ಜನ, ತಾಲೂಕಿನಲ್ಲಿ 3 ತಿಂಗಳಲ್ಲಿ ನಾಲ್ಕು ಸಾವು

Similar News