ಬಿಎಸ್ ವೈ ವಿರುದ್ಧ ಇನ್ನು ಮುಂದೆ ಮಾತನಾಡಲ್ಲ: ರಾಜಕೀಯ ಸಂಘರ್ಷಕ್ಕೆ ಪೂರ್ಣ ವಿರಾಮ ಹಾಕಿದ ಶಾಸಕ ಯತ್ನಾಳ್

Update: 2023-01-26 12:13 GMT

ವಿಜಯಪುರ: 'ನನಗೆ ಕೇಂದ್ರ ನಾಯಕರ ಆಶೀರ್ವಾದವಿದೆ. ಚಿಲ್ಲರೆ ವ್ಯಕ್ತಿಗಳ ಬಗ್ಗೆ ಮಾತಮಾಡ ಬೇಡ ಎಂದಿದ್ದಾರೆ‌ ನಾನು ಅದಕ್ಕೆ ಒಪ್ಪಿದ್ದೇನೆ' ಎಂದು ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಡಿಯೂರಪ್ಪ ‌ನವರು ಹಿರಿಯರಿದ್ದಾರೆ ಅವರ ಬಗ್ಗೆಯೂ ಮಾತನಾಡ ಬೇಡಾ ಎಂದಿದ್ದಾರೆ ಅದಕ್ಕೂ ಒಪ್ಪಿದ್ದೇನೆ. ಹೀಗಾಗಿ ಇನ್ನು ಮುಂದೆ ಯಡಿಯೂರಪ್ಪನವರ ಬಗ್ಗೆ‌ ನನಗೆ ಪ್ರಶ್ನೆ ಮಾಡಬೇಡಿ, ನನಗೆ ಅವರ ಮೇಲೆ ಅಪಾರ ಗೌರವವಿದೆ, ಅವರ ಬಗ್ಗೆ ನಾನೇನು ಹೇಳಲ್ಲ'' ಎಂದು ತಿಳಿಸಿದರು. 

'ವಿಜಯಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕ್ರಮಕ್ಕೆ‌ ನಾನು ನಡ್ಡಾರಿಂದ ಅನುಮತಿ ಪಡೆದೇ ಕಾರ್ಯಕ್ರಮಕ್ಕೆ ಗೈರಾಗಿದ್ದೆ' ಎಂದು ಇದೇ ವೇಳೆ ಸ್ಪಪ್ಟಪಡಿಸಿದರು.  

'ನಾಯಕತ್ವ ಬದಲಾವಣೆ ಇಲ್ಲ':

'ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವ ಬಗ್ಗೆ ಯಾವುದೇ ಶಾಸಕರ ತಕಾರರು ಇಲ್ಲ. ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ನಾಯಕತ್ವ ಬದಲಾವಣೆ ಇಲ್ಲ. ನಮ್ಮ ಕೇಂದ್ರ ನಾಯಕರ ಅಣತಿಯಂತೆ ಸಾಮೂಹಿಕ ನಾಯಕತ್ವ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. 

Similar News