ಪಿಎಫ್‍ಐ ನಿಷೇಧ ಪ್ರಕರಣ: ವಿಶೇಷ ಅಭಿಯೋಜಕರಾಗಿ ಪ್ರಸನ್ನಕುಮಾರ್ ನೇಮಕ

Update: 2023-01-26 13:19 GMT

ಬೆಂಗಳೂರು, ಜ.25: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಹಿರಿಯ ವಕೀಲ ಪಿ.ಪ್ರಸನ್ನಕುಮಾರ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ರಾಜ್ಯ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. 

ನ್ಯಾಯಾಲಯದಲ್ಲಿ ಪಿಎಫ್‍ಐ ಸಂಘಟನೆಗಳ ವಿರುದ್ಧ ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ(ಯುಎಪಿ) ಅಡಿ ಪ್ರಕರಣಗಳ ಸಂಬಂಧ ರಾಜ್ಯ ಸರಕಾರದ ಪರವಾಗಿ ಪ್ರಸನ್ನಕುಮಾರ್ ವಾದ ಮಂಡಿಸಲಿದ್ದಾರೆ. 

ಇದುವರೆಗೆ ಎನ್‍ಐಎ ಪರ ವಕೀಲರಾಗಿ ಹಲವು ಕೇಸ್‍ಗಳಲ್ಲಿ ಶಂಕಿತ ಉಗ್ರರಿಗೆ ಶಿಕ್ಷೆ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಈಗ ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇರೆಗೆ ನಿಷೇಧಕ್ಕೊಳಗಾಗಿರುವ ಪಿಎಫ್‍ಐ ವಿರುದ್ಧ ವಾದಿಸಲಿದ್ದಾರೆ. 

Similar News