ಫೆಬ್ರವರಿಗೆ ಕಾಂಗ್ರೆಸ್‌ನ ಮನೆ ಖಾಲಿ: ನಳಿನ್ ಕುಮಾರ್ ಕಟೀಲ್

Update: 2023-01-27 14:44 GMT

ದಾವಣಗೆರೆ: 'ದಲಿತ ಸಿಎಂ ಚರ್ಚೆ ಹುಟ್ಟು ಹಾಕಿದವರು ಸಿದ್ದರಾಮಯ್ಯ. ಹಾಗೇ ದಲಿತರು ಮುಖ್ಯಮಂತ್ರಿ ಆಗದ ರೀತಿ ತಡೆಯಲು ತಂತ್ರ ಮಾಡಿರುವುದು ಕೂಡ ಅದೇ ಸಿದ್ದರಾಮಯ್ಯ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ನಗರದಲ್ಲಿ  ಶುಕ್ರವಾರ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘‘ಕಾಂಗ್ರೆಸ್‌ನಿಂದ ಇಷ್ಟೇ ಜನ ಬಿಜೆಪಿ ಸೇರುತ್ತಾರೆಂದು ಹೇಳಲಾಗುವುದಿಲ್ಲ ಎನ್ನುತ್ತಿದ್ದಂತೆ, ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತಿರುವುದನ್ನು ತೋರಿಸಿ, ಕಾದುನೋಡಿ, ಫೆಬ್ರವರಿಗೆ  ಕಾಂಗ್ರೆಸ್‌ನ ಮನೆ ಖಾಲಿ ಆಗುತ್ತದೆ’’ ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್‌ನಿಂದ ವಲಸೆ ಹೋದ 12 ಶಾಸಕರಿಗೆ ಮೂಲ ಬಿಜೆಪಿಗರು ಸಹಕಾರ ನೀಡುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ‘‘ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಎಲ್ಲಿಂದ ಬಂದರು? ಸ್ವತಃ ವಲಸಿಗರಾಗಿ ಅವರಿಗೆ ಬೇರೆಯವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.

Similar News