ಕಾಫಿನಾಡಿನ ಯುವಕ ವಿನ್ಯಾಸಗೊಳಿಸಿರುವ ಲಘು ಯುದ್ಧ ವಾಹನಗಳ ಮಾದರಿಗೆ ಪ್ರಶಂಶೆ
Update: 2023-01-27 18:14 GMT
ಚಿಕ್ಕಮಗಳೂರು, ಜ.27: ಮಲೆನಾಡಿನ ಯುವಕನೋರ್ವ ವಿನ್ಯಾಸಗೊಳಿಸಿರುವ ಲಘು ಯುದ್ಧ ವಾಹನಗಳ ಮಾದರಿ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಮೂಡಿಗೆರೆ ತಾಲೂಕಿನ ಲೋಕವಳ್ಳಿಯ ಕಾಫಿ ಬೆಳೆಗಾರ ಬಿ.ಎನ್.ಮನಮೋಹನ್ ಹಾಗೂ ರಾಧಿಕಾ ದಂಪತಿಯ ಪುತ್ರ ಬಿ.ಎಂ.ವರುಣ್ ಶೆಟ್ಟಿ ಈ ಸಾಧನೆ ಮಾಡಿರುವ ಯುವಕನಾಗಿದ್ದಾನೆ. ವರುಣ್ ಅಹಮದಾಬಾದ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನಿಂಗ್ ಸಂಸ್ಥೆಯಲ್ಲಿ ಟ್ರಾನ್ಸ್ ಪೋರ್ಟೇಷನ್ ಮತ್ತು ಆಟೊ ಮೊಬೈಲ್ ಡಿಸೈನಿಂಗ್ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು, ಈತ ಭಾರತೀಯ ಸೇನೆಯ ಸಹಯೋಗದೊಂದಿಗೆ ಲಘು ಯುದ್ಧ ವಾಹನಗಳ ಮಾದರಿಯನ್ನು ವಿನ್ಯಾಸಗೊಳಿಸಿದ್ದಾರೆ.
ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಆಟೊ ಎಕ್ಸ್ಪೋ 2023ರಲ್ಲಿ ಪ್ರದರ್ಶಿಸಲ್ಪಟ್ಟ ಈ ಮಾದರಿ ಪ್ರಶಂಸೆಗೆ ಪಾತ್ರವಾಗಿದೆ.