ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಹಾಸನದಲ್ಲಿ ಗೆಲುವು ಖಚಿತ, ಬರೆದಿಟ್ಟುಕೊಳ್ಳಿ ಎಂದ ಸೂರಜ್‌ ರೇವಣ್ಣ

''ಅಭ್ಯರ್ಥಿ ಆಯ್ಕೆ ಅಧಿಕಾರ ಇರೋದು ಎಚ್.ಡಿ ರೇವಣ್ಣಗೆ ಮಾತ್ರ''

Update: 2023-01-28 07:53 GMT

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಲ್ಲಿ ಟಿಕೆಟ್ ಗೊಂದಲ ಮುಂದುವರಿದಿದ್ದು, ಈ ಬಗ್ಗೆ ಭವಾನಿ ರೇವಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೂರಜ್‌ ರೇವಣ್ಣ, ''ಇವತ್ತಿನ ಲೆಕ್ಕಾಚಾರ ನೋಡಿದರೆ  ಭವಾನಿ  ರೇವಣ್ಣ ಅಭ್ಯರ್ಥಿಯಾದರೆ ಹಾಸನದಲ್ಲಿ ಗೆಲುವು ಖಚಿತ, ಇದನ್ನ ಬರೆದಿಟ್ಟುಕೊಳ್ಳಿ. ಯಾರೋ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸುವ ಹೇಳಿಕೆ ಬಿಟ್ಟುಬಿಡ ಬೇಕು'' ಎಂದು ಪಕ್ಷದ ನಾಯಕರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.  

'ಹಾಸನದಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಅಧಿಕಾರ ಇದ್ದರೆ ಅದು ಎಚ್.ಡಿ ರೇವಣ್ಣ ಸಾಹೇಬರಿಗೆ ಮಾತ್ರ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರಷ್ಟು ಇನ್ನೊಬ್ಬ ಸಮರ್ಥ ನಾಯಕ ಭೂಮಿ ಮೇಲೆಯೇ ಇಲ್ಲ ಎಂದು ಹೇಳೋದಕ್ಕೆ ಬಯಸುತ್ತೇನೆ' ಎಂದು ಹೇಳಿದರು. 

ಇದನ್ನೂ ಓದಿ: ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ, ಅಗತ್ಯವಿದ್ದರೆ ಭವಾನಿ ರೇವಣ್ಣಗೆ ನಾನೇ ಹೇಳುತ್ತಿದ್ದೆ: ಎಚ್‌.ಡಿ.ಕುಮಾರಸ್ವಾಮಿ

Full View

Similar News