ಭವಾನಿ ರೇವಣ್ಣಗೆ ಟಿಕೆಟ್​​​ ನೀಡುವಂತೆ ಪಟ್ಟು: ಸಂಸದ ಪ್ರಜ್ವಲ್​ ನಿವಾಸದ ಎದುರು ಕಾರ್ಯಕರ್ತರ ಪ್ರತಿಭಟನೆ

Update: 2023-01-28 09:43 GMT

ಹಾಸನ: ರಾಜ್ಯ ರಾಜಕಾರಣದಲ್ಲಿ ಸದ್ಯ ಹಾಸನ ಟಿಕೆಟ್‌ ವಿಚಾರ ಹೆಚ್ಚು ಗಮನ ಸೆಳೆಯುತ್ತಿದ್ದು, ಶನಿವಾರ ಹಾಸನ ವಿಧಾನ ಸಭೆ ಕ್ಷೇತ್ರದಿಂದ ಭವಾನಿಗೆ ರೇವಣ್ಣ ಅವರಿಗೆ ಟಿಕೆಟ್​​​ ನೀಡಲೇಬೇಕೆಂದು ಆಗ್ರಹಿಸಿ ಜೆಡಿಎಸ್ ನ ಮಹಿಳಾ ಕಾರ್ಯಕರ್ತರು ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಹಾಸನ ನಗರದ ಆರ್ ಸಿ ರಸ್ತೆಯಲ್ಲಿರುವ ಸಂಸದ ಪ್ರಜ್ವಲ್ ಅವರ ಸರ್ಕಾರಿ ನಿವಾಸದ ಮುಂದೆ ಜಮಾಯಿಸಿರುವ ಬೆಂಬಲಿಗರು ಹಾಗೂ ನೂರಾರು ಸಂಖ್ಯೆಯಲ್ಲಿರುವ ಜೆಡಿಎಸ್​​ ನ ಮಹಿಳಾ ಕಾರ್ಯಕರ್ತರು, ಹಾಸನದಿಂದ‌ ಭವಾನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. 

 

Similar News