ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಪ್ರಯತ್ನ ವಿಫಲ: ಸಂಸದ ಬಿ.ವೈ ರಾಘವೇಂದ್ರ

Update: 2023-01-28 12:09 GMT

ಶಿವಮೊಗ್ಗ, ಜ.28: 'ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿ ತಲುಪಿದ್ದು, ಉಳಿಸುವ ಸಲುವಾಗ ಎಲ್ಲಾ ಪ್ರಯತ್ನಗಳು ನಡೆಸಿದ್ದೇವೆ' ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಭದ್ರಾವತಿಯ ವಿಐಎಸ್‌ಎಲ್ ಹಾಗೂ ಎಂಪಿಎಂ ವಿಷಯ ಅನೇಕ ವರ್ಷದಿಂದ ಚರ್ಚೆಯಲ್ಲಿದೆ, ಮುಚ್ಚುವ ಸ್ಥಿತಿಯಲ್ಲಿದ್ದ ಅವುಗಳನ್ನು ಉಳಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಮತ್ತು ಸಂಘಟನೆ ಮಾಡಿದೆ. ವಿಐಎಸ್‌ಎಲ್ ಕಾರ್ಖಾನೆ ನಡೆಸುವ ಪ್ರಯತ್ನ ರಾಜ್ಯ ಸರ್ಕಾರ  ನಡೆಸಿದರೂ ಸಫಲವಾಗಲಿಲ್ಲ' ಎಂದರು.

'ವಿಐಎಸ್‌ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಸೈಲ್ ಗೆ  ಬರೆದು ಕೊಟ್ಟಿದ್ದು, ಕೇಂದ್ರ ಸರ್ಕಾರದ ಸೈಲ್ ನಡೆಸಿ ನಷ್ಟ ಅನುಭವಿಸಿತು. 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮುನ್ನೆಡೆಸುವ ಯತ್ನ ನಡೆದು ಅದಕ್ಕೆ ವಿರೋಧ ವ್ಯಕ್ತವಾಯಿತು' ಎಂದರು.

'ಖಾಸಗೀಕರಣದ ಪ್ರಕ್ರಿಯೆ ಹಂತವಾಗಿ ಬಿಡ್ ಕರೆದರೂ ಇದುವರೆಗೆ ಯಾರು ಬಂದಿಲ್ಲ. ವಿಐಎಸ್‌ಎಲ್ ಕಾರ್ಖಾನೆಯ ಕಾರ್ಮಿಕ ರನ್ನು ಜೊತೆಗೂಡಿ ಉಳಿಸುವ ದೃಷ್ಟಿಯಿಂದ ಪ್ರಯತ್ನ ನಡೆಯಿತು. 2018 ರಲ್ಲಿ 28 ಕಂಪನಿಯ 85 ಸಾವಿರ ಕೋಟಿ ,2019 ರಲ್ಲಿ 28 ಕಂಪನಿಯಿಂದ 84,000 ಕೋಟಿ , 2020 ರಲ್ಲಿ 18 ಕಂಪೆನಿಯಿಂದ 32 ಸಾವಿರ ಕೋಟಿ ರೂಪಾಯಿ2021 ರಲ್ಲಿ 10 ಕಂಪನಿಯ13.5 ಕೋಟಿ 2022 ರಲ್ಲಿ  8 ಕಂಪನಿಯ 31 ಸಾವಿರ ಕೋಟಿ ಬಂಡವಾಳ ಹಿಂಪಡೆದಿದೆ.ಅಲ್ಲದೇ ತನ್ನ ಪಾಲಿನ ಷೇರುಗಳನ್ನು ಹಿಂತೆಗೆದುಕೊಳ್ಳಲಾಗಿದೆ' ಎಂದರು.

'ಕಳೆದ ಎರಡು ವರ್ಷಗಳಲ್ಲಿ ಸೈಲ್ ನಿಂದ ಬಂಡವಾಳ ಹೂಡಿಕೆ ಮಾಡಿಸಿದೆ. ಪ್ರತಿ ವರ್ಷ 80 ಕೋಟಿ ನಷ್ಟ ಅನುಭವಿಸಿತು. ಈಗಲೂ ಕೂಡ ಕಾರ್ಖಾನೆ ಉಳಿಸುವ ಸಲುವಾಗಿ ಪ್ರಯತ್ನ ನಡೆದಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈ ಜೊತೆಗೆ ಕಾರ್ಖಾನೆಯನ್ನು ರಾಜ್ಯ ಸರ್ಕಾರದಿಂದ ನಡೆಸಲು ಅವಕಾಶವನ್ನು ನೀಡಲು ಮಾತುಕತೆ ನಡೆಸಿದ್ದೇವೆ. ಶಾಂತಿಯುತ ಹೋರಾಟ ಮಾಡೋಣ' ಎಂದು ಕಾರ್ಮಿಕರಲ್ಲಿ ವಿನಂತಿ ಮಾಡಿದರು.

ಎಂಪಿಎಂ ಕಾರ್ಖಾನೆಯ  ವಸತಿಗೃಹಗಳನ್ನು ಒನ್ ಟೈಮ್ ಸೆಟಲ್‌ಮೆಂಟ್ ಮಾಡಿ ರಾಜ್ಯ ಸರ್ಕಾರ ಎಸ್ ಬಿಎಂ ಬ್ಯಾಂಕ್ ನಿಂದ ಉಳಿಸಿಕೊಂಡಿದ್ದೇವೆ. ದೇಶ ಮತ್ತು ರಾಜ್ಯ ಸರ್ಕಾರಗಳು ಅಂದು ವಿಐಎಸ್‌ಎಲ್ ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಮಾಡಿ ಉಳಿಸುವ ಪ್ರಯತ್ನ ಮಾಡಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ಪತ್ರ ಬರೆದಿದ್ದಾರೆ. ಪಾಲಿಸಿ ಕಾರಣದಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುತ್ತಿದೆ. ಅದಷ್ಟು ಬೇಗ ಕಾರ್ಖಾನೆ ಖಾಸಗಿ ವ್ಯಕ್ತಿಗಳ ಮೂಲಕ ಪುನರ್ ಆರಂಭಿಸಲಾಗುತ್ತದೆ. ಶಿವಮೊಗ್ಗ ವಿಮಾನ ನಿಲ್ದಾಣ ಫೆ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಲಾಗುತ್ತದೆ ಎಂದಿದ್ದಾರೆ.

ಪತ್ರಿಕಾಗೊಷ್ಟಿಯಲ್ಲಿ  ಪ್ರಮುಖರಾದ ಬಿ.ಕೆ.ಶ್ರೀನಾಥ್, ಎಸ್.ಎನ್.ಚನ್ನಬಸಪ್ಪ, ಶಿವರಾಜ್, ಧರ್ಮಪ್ರಸಾದ್, ರಮೇಶ್, ಚಂದ್ರಶೇಖರ್, ವಿನ್ಸ್ಂಟ್, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.

Similar News