ವಿಜಯಪುರ: ಮೂವರು ಮಕ್ಕಳನ್ನು ಸಂಪ್ ಗೆ ಎಸೆದು ತಾಯಿ ಆತ್ಮಹತ್ಯೆ

Update: 2023-01-29 05:07 GMT

ವಿಜಯಪುರ, ಜ.29: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ತನ್ನ ಮೂವರು ಪುಟಾಣಿ ಮಕ್ಕಳನ್ನು ಸಂಪ್ ಗೆ ಎಸೆದು ತಾನೂ ಆತ್ಮಹತ್ಯೆ(suicide) ಮಾಡಿಕೊಂಡ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಶನಿವಾರ ತಡರಾತ್ರಿ ನಡೆದಿದೆ.

ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ವಿಠಲವಾಡಿ ತಾಂಡಾ ನಿವಾಸಿ ಗೀತಾ ರಾಮು ಚವ್ಹಾಣ (32) ತನ್ನ ಮೂವರು ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಿಶನ್ (3), ಸಮರ್ಥ(4) ಹಾಗೂ ಸೃಷ್ಟಿ(6) ಹತ್ಯೆಯಾದ ಮಕ್ಕಳು.

ಶನಿವಾರ ರಾತ್ರಿ‌ ಪತಿ ರಾಮು ಮತ್ತು ಗೀತಾ ನಡುವೆ ಜಗಳ ನಡೆದಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ  ಪತಿ ಮಲಗಿದ್ದ ವೇಳೆ ಮೂವರು‌ ಮಕ್ಕಳನ್ನು ನೀರಿನ‌ ಸಂಪ್ ಗೆ ಎಸೆದ ಗೀತಾ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ. ಇಂದು ಬೆಳಗ್ಗೆ ರಾಮು ಎದ್ದಾಗ ಪತ್ನಿ, ಮಕ್ಕಳನ್ನು ಕಾಣದಿರುವ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

 ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

Similar News