ಹಾವೇರಿ: ಬಾದಾಮಿ ಎಂದು ಭಾವಿಸಿ ಕಾಡು ಔಡಲ ಬೀಜ ತಿಂದು 9 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Update: 2023-01-30 17:30 GMT

ಹಾವೇರಿ, ಜ.30: ಬಾದಾಮಿ ಎಂದು ಭಾವಿಸಿ ಕಾಡು ಔಡಲ ಬೀಜ ತಿಂದು 9 ಮಂದಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಕಟ್ಟಿ ತಾಂಡಾ ವರದಿಯಾಗಿದೆ. 

ನೀರಲಕಟ್ಟಿ ತಾಂಡಾ ಸರ್ಕಾರಿ ಶಾಲೆಯೊಂದರಲ್ಲಿ ಶಾಲೆ ಬಳಿ ಸಿಕ್ಕ ಕಾಡು ಔಡಲ ಬೀಜವನ್ನು ತಿಂದ ಹಿನ್ನೆಲೆಯಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡು ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಮಕ್ಕಳ ಪೋಷಕರು ಅವರನ್ನು ಆಸ್ಪತ್ರೆಗೆ ದಾಖಲಿಸಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. 

DYSPಮಂಜುನಾಥ ಪಿ,CPI ಬಸವರಾಜ ಹಳಬಣ್ಣವರ, PSI ಸಂಪತ್ ಅನಿಕಿವಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ದೂರು ದಾಖಲಾಗಿದೆ. 

Similar News