ಕೊಪ್ಪ: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಇಬ್ಬರು ಸಾವು

Update: 2023-01-31 07:12 GMT

ಚಿಕ್ಕಮಗಳೂರು: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ  ವರದಿಯಾಗಿದೆ. 

ನಿಲುವಾಗಿಲು ಗ್ರಾಮದ ಸುಬ್ರಹ್ಮಣ್ಯ (30) ಹಾಗೂ ಸುನಿಲ್ (27) ಮೃತ ದುರ್ದೈವಿಗಳು.

ಸುಬ್ರಹ್ಮಣ್ಯ ಹಾಗೂ ಸುನಿಲ್‌ ಇಬ್ಬರೂ ಟ್ರ್ಯಾಕ್ಟರ್ ಚಕ್ರ ಬದಲಾಯಿಸಲು ಮುಂದಾಗಿದ್ದ ವೇಳೆ ಟ್ರ್ಯಾಕ್ಟರ್ ನ ಟ್ರಾಲಿ ಉರುಳಿದೆ.  ಪರಿಣಾಮ ಟ್ರಾಲಿ ಕೆಳಗೆ ಸಿಲುಕಿದ್ದ ಇವರಿಬ್ಬರು ಹೊರಬರಲು ಆಗದೆ ಗಂಭೀರ ಗಾಯಗೊಂಡಿದ್ದಾರೆನ್ನಲಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Similar News