ಕೊಪ್ಪ: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಇಬ್ಬರು ಸಾವು
Update: 2023-01-31 07:12 GMT
ಚಿಕ್ಕಮಗಳೂರು: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ವರದಿಯಾಗಿದೆ.
ನಿಲುವಾಗಿಲು ಗ್ರಾಮದ ಸುಬ್ರಹ್ಮಣ್ಯ (30) ಹಾಗೂ ಸುನಿಲ್ (27) ಮೃತ ದುರ್ದೈವಿಗಳು.
ಸುಬ್ರಹ್ಮಣ್ಯ ಹಾಗೂ ಸುನಿಲ್ ಇಬ್ಬರೂ ಟ್ರ್ಯಾಕ್ಟರ್ ಚಕ್ರ ಬದಲಾಯಿಸಲು ಮುಂದಾಗಿದ್ದ ವೇಳೆ ಟ್ರ್ಯಾಕ್ಟರ್ ನ ಟ್ರಾಲಿ ಉರುಳಿದೆ. ಪರಿಣಾಮ ಟ್ರಾಲಿ ಕೆಳಗೆ ಸಿಲುಕಿದ್ದ ಇವರಿಬ್ಬರು ಹೊರಬರಲು ಆಗದೆ ಗಂಭೀರ ಗಾಯಗೊಂಡಿದ್ದಾರೆನ್ನಲಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.