ಪ್ರಚೋದನಕಾರಿ ಭಾಷಣ: ಶರಣ್ ಪಂಪ್​ ವೆಲ್ ವಿರುದ್ಧ ಎಫ್ಐಆರ್​ ದಾಖಲು

Update: 2023-02-01 10:47 GMT

ತುಮಕೂರು: 'ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆಯನ್ನು ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ' ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ತುಮಕೂರು ಜಿಲ್ಲೆಯ ತಿಲಕ್​ಪಾರ್ಕ್​ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್​ಐಆರ್​ ದಾಖಲು ಮಾಡಲಾಗಿದೆ. 

ನಗರದ ಬಾರ್​ಲೈನ್​ ನಿವಾಸಿಯಾಗಿರುವ ಸೈಯದ್ ಬುರ್ಹಾನ್​ ಉದ್ದೀನ್​​ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಶರಣ್ ಪಂಪ್ ವೆಲ್, "ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಯಾರು ಮುಸಲ್ಮಾನ ಜಿಹಾದಿಗಳಿದ್ದಾರೆ, ಅವರಿಗೆ ಉತ್ತರವನ್ನು ಕೊಡಬೇಕೆನ್ನುವ ಕಾರಣಕ್ಕೋಸ್ಕರ ಸುರತ್ಕಲ್ ನಲ್ಲಿ ಇದ್ದಂತಹ ಬಿಸಿ ನೆತ್ತರಿನ ಯುವಕರು, ಯಾರು ಇಲ್ಲದ ಸಮಯದಲ್ಲದಲ್ಲ, ಇಡೀ ಮಾರ್ಕೆಟ್ ನಲ್ಲಿದ್ದ ಜನರ ಎದುರೇ ನುಗ್ಗಿ ನುಗ್ಗಿ ಹೊಡೆದು ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರ ನೀಡ್ತಾರಲ್ವ ಅದು ಹಿಂದೂ ಯುವಕರ ತಾಕತ್ತು" ಎಂದು ಫಾಝಿಲ್ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು. ಈ ಕುರಿತ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. 

Similar News