ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತಿರುವ BMTC ಬಸ್ಸುಗಳು: ಕಾಂಗ್ರೆಸ್ ಆಕ್ರೋಶ

''ಉ.ಕ ಗ್ರಾಮೀಣ ಜನರೆಂದರೆ ಸರ್ಕಾರಕ್ಕೆ ಅಷ್ಟೊಂದು ತಾತ್ಸಾರವೇ?''

Update: 2023-02-02 12:10 GMT

ಬೆಂಗಳೂರು: 'ಉತ್ತರ ಕರ್ನಾಟಕದ ಭಾಗದಲ್ಲಿ ನಿರ್ವಹಣೆ ಇಲ್ಲದೆ ಬಳಕೆಗೆ ಯೋಗ್ಯವಲ್ಲದ BMTC ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಂತಿವೆ' ಎಂದು ಕಾಂಗ್ರೆಸ್ @INCKarnataka ಆರೋಪಿಸಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ , ಹಳೆಯ ಬಿಎಂಟಿಸಿ ಬಸ್ಸುಗಳನ್ನು ಉತ್ತರ ಕರ್ನಾಟಕದ ಸಾಗಹಾಕಿದ ಸರ್ಕಾರಕ್ಕೆ ಉತ್ತರ ಕರ್ನಾಟಕದ ಜನರೆಂದರೆ ಅಷ್ಟೊಂದು ತಾತ್ಸಾರವೇ? ಎಂದು ಪ್ರಶ್ನೆ ಮಾಡಿದೆ. 

'ನಿರ್ವಹಣೆ ಇಲ್ಲದೆ ಬಳಕೆಗೆ ಯೋಗ್ಯವಲ್ಲದ ಬಿಎಂಟಿಸಿ ಬಸ್ಸುಗಳು ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತಿದ್ದು,  ಉ.ಕ ಗ್ರಾಮೀಣ ಜನರನ್ನು ಬಿಜೆಪಿ ಎರಡನೇ ದರ್ಜೆಯ ನಾಗರಿಕರಂತೆ ಕಾಣುತ್ತಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ಬಳಕೆಗೆ ಯೋಗ್ಯವಲ್ಲದ ಹಲವು ಬಿಎಂಟಿಸಿ ಬಸ್ಸುಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬೆಂಗಳೂರಿನಿಂದ ಸ್ಥಳಾಂತರಿಸಲಾಗಿವೆ ಎಂಬ ಆರೋಪ ಕೇಳಿ ಬರುತ್ತಿದ್ದು,  ಬಸ್​ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ.

Similar News