ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋ.ರೂ. ಹಣ ನೀಡ್ತೇನೆ: ಸಿದ್ದರಾಮಯ್ಯಗೆ ಅಭಿಮಾನಿ ಆಹ್ವಾನ

Update: 2023-02-02 15:02 GMT

ಚಿಕ್ಕಮಗಳೂರು, ಫೆ.2:   ಚಿಕ್ಕಮಗಳೂರು ವಿಧಾನ ಸಭೆ ಕ್ಷೇತ್ರದಲ್ಲಿ ಸಿ.ಟಿ. ರವಿ ವಿರುದ್ಧ  ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅಡಿಕೆ ತೋಟ ಮಾರಿಯಾದರೂ ಒಂದು ಕೋಟಿ ನೀಡುವುದಾಗಿ ಅಭಿಮಾನಿಯೊಬ್ಬರು ಅಫರ್ ನೀಡಿದ್ದಾರೆ.

ಸಿ.ಟಿ. ರವಿ ವಿರುದ್ಧ ಸ್ಪರ್ಧಿಸಿದಲ್ಲಿ ಅಡಿಕೆ ತೋಟ ಮಾರಿ ಹಣ ನೀಡುತ್ತೇನೆ ಎಂದು ಚಿಕ್ಕಮಗಳೂರು ನಗರ ಕೆಂಪನಹಳ್ಳಿ ನಿವಾಸಿ ಬಾಲಕೃಷ್ಣ ಎಂಬವರು ಸಿದ್ದರಾಮಯ್ಯ ಅವರಿಗೆ ಈ ಆಫರ್ ಘೋಷಿಸಿದ್ದಾರೆ. 

'ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧಿಸಬೇಕು. ಅವರು ಸ್ಪರ್ಧಿಸಿದಲ್ಲಿ ಚುನಾವಣೆಗೆ 1ಕೋಟಿ ವ್ಯಯಿಸಲು ಸಿದ್ಧನಿದ್ದೇನೆ. ಇದಕ್ಕಾಗಿ ಮೂರು ಎಕರೆ ಅಡಿಕೆ ತೋಟವನ್ನು ಮಾರಲು ಸಿದ್ಧ, ಇದಕ್ಕೆ ಇಡೀ ಕುಟುಂಬದ ಒಪ್ಪಿಗೆ ಸಿಕ್ಕಿದೆ. ಸಿದ್ದರಾಮಯ್ಯ ಸ್ಪರ್ಧಿಸಿದರೆ ಒಂದು ಕೋಟಿಗೂ ಅಧಿಕ ಹಣ ನೀಡಿದರೂ ಯಾವುದೇ ತಕರಾರಿಲ್ಲ ಎಂದು ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದು ಬಾಲಕೃಷ್ಣ ಹೇಳಿದ್ದಾರೆ.

Similar News