JDS 'ಪಂಚರತ್ನ ಯಾತ್ರೆ'ಯ ಬಸ್ ಬ್ರೇಕ್ ಫೇಲ್ ಆಗಿ ಹಾಸನದಲ್ಲೇ ನಿಂತಿದೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
Update: 2023-02-04 07:12 GMT
ಬೆಂಗಳೂರು: ಜೆಡಿಎಸ್ ನಡೆಸುತ್ತಿರುವ 'ಪಂಚರತ್ನ ರಥ ಯಾತ್ರೆ'ಯ ಬಸ್ಸಿನ ಬ್ರೇಕ್ ಫೇಲ್ ಆಗಿ ಹಾಸನದ ಮನೆಯಲ್ಲೇ ನಿಂತಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ನಗರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಹಾಸನ ಜೆಡಿಎಸ್ ನಲ್ಲಿ ಜಗಳ ನಡಿಯುತ್ತಿದೆ. ಕಾಂಗ್ರೆಸ್ ನಲ್ಲೂ ಕೂಡ ಜಗಳ ಶುರುವಾಗಿದೆ, ಎರಡು ಗುಂಪಿತ್ತು, ಈಗ ಮೂರು ಗುಂಪಾಗಿದೆ' ಎಂದು ಟೀಕಿಸಿದರು.
''ಡಬಲ್ ಇಂಜಿನ್ ಸರ್ಕಾರಗಳಿಂದ ಬಹಳ ಅದ್ಭುತವಾದ ಕೆಲಸ ನಡೆಯುತ್ತಿದ್ದರೆ, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಚುನಾವಣೆಯಲ್ಲಿ ಸರ್ಧಿಸಲು ಇನ್ನೂ ಕೂಡ ಒಂದು ಕ್ಷೇತ್ರ ಸಿಕ್ಕಿಲ್ಲ. ಕಾಂಗ್ರೆಸ್ ಪರಮೇಶ್ವರ್ ಅವರ ಜಗಳದಿಂದಾಗಿ ಮೂರು ಬಣಗಳಾಗಿವೆ'' ಎಂದು ಹೇಳಿದರು.