ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ: ಎಚ್. ವಿಶ್ವನಾಥ್

Update: 2023-02-04 07:34 GMT

ಮೈಸೂರು, ಫೆ.4: 'ನಾನು ಈ ಹಿಂದೆ ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿದ್ದು, ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ಸತ್ಯ. ಆದರೆ,  ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ. 

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಹಿಡಿಯುವ ಧ್ವಜ ಕಾಲದ ಅನುಸಾರ ಬದಲಾಗಿರಬಹುದು. ಆದರೆ, ನನ್ನ ತತ್ವಗಳು ಬದಲಾಗಿಲ್ಲ. ನಾನು ಈಗ ಬಿಜೆಪಿ ತೊರೆಯಲು ಸಿದ್ಧವಾಗಿರುವುದು ಸತ್ಯ' ಎಂದು ಸ್ಪಷ್ಟಪಡಿಸಿದರು. 

'ಐ ಯಾಮ್ ಕ್ಲೀನ್ ಮ್ಯಾನ್. ನಾನು ಇಷ್ಟು ವರ್ಷ ರಾಜಕಾರಣದಲ್ಲಿದ್ದರೂ ಇನ್ನು ಕೂಡ ಚಿಕ್ಕ ಮನೆಯಲ್ಲಿದ್ದೇನೆ. ಮೂರು ಎಕರೆ ಜಮೀನಿದೆ, ನನ್ನ ಮಕ್ಕಳನ್ನು ಅದರಲ್ಲೇ ಸಾಕಿದ್ದೇನೆ' ಎಂದು ತಿಳಿಸಿದರು.

'ರಾಜಕಾರಣಿಗಳು ನೀನು ಅಧಿಕಾರದಲ್ಲಿದ್ದಾಗ, ಮಂತ್ರಿ ಆಗಿದ್ದಾಗ ಏನು ಮಾಡಿದೆ ಎಂದು ಪ್ರಶ್ನೆ ಮಾಡ ಬೇಕು.  ಅದು ಬಿಟ್ಟು ತೀರಾ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದು ಸರಿಯಲ್ಲ' ಎಂದು ಸೀಡಿ ವಿಚಾರದ ಬಗ್ಗೆ ಪತ್ರಕರ್ತ ಪ್ರಶ್ನೆಗೆ ಪ್ರತಿಕ್ರಿತಿಯಿಸಿದರು.  

Similar News