ಫೆ. 05 ರಂದು ಚಿತ್ರದುರ್ಗದ ಸೀಬಾರ್ ನಲ್ಲಿ 'ಇಹ್ಸಾನ್ ಗ್ರ್ಯಾಂಡ್ ಅಸೆಂಬ್ಲಿ'

Update: 2023-02-04 08:19 GMT

ಚಿತ್ರದುರ್ಗ: ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಹಳ್ಳಿ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಇಹ್ಸಾನ್ ಕರ್ನಾಟಕ ಇದೀಗ  ಅಲ್ಲಿ ಕಲಿಯುತ್ತಿರುವ ಮದ್ರಸ ವಿದ್ಯಾರ್ಥಿಗಳ ಗ್ರ್ಯಾಂಡ್ ಅಸೆಂಬ್ಲಿ ಕಾರ್ಯಕ್ರಮ ಫೆ.5ರಂದು ಚಿತ್ರದುರ್ಗದ ಸೀಬಾರ್ ಇಹ್ಸಾನ್ ಸೆಂಟರ್ ನಲ್ಲಿ ನಡೆಯಲಿದೆ. 

ಕಾರ್ಯಕ್ರಮದ ನೇತೃತ್ವವನ್ನು ಖಾಝಿ ಫಝಲ್ ಕೋಯಮ್ಮ ತಂಙಳ್  ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಮುಫ್ತಿ ಅನ್ವರ್ ಅಲಿ ಸಾಹೇಬ್ ಬೆಂಗಳೂರು , ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳ ಕಟ್ಟೆ, ಮೌಲಾನಾ ಶಾಫಿ ಸಅದಿ ಬೆಂಗಳೂರು , ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ , ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ , ಅಬ್ದುರ್ರಹ್ಮಾನ್ ಮದನಿ ಜೆಪ್ಪು, D P ಯೂಸಫ್ ಸಖಾಫಿ ಬೈತಾರ್ , ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ, ರಾಜ್ಯ ವಕಫ್ ಸದಸ್ಯರಾದ ಯಕೂಬ್ ಹೊಸನಗರ,ಅನ್ವ್ರ್ ಬಾಷಾ,ಮುಹಮ್ಮದ್ ಹಾಜಿ ಸಾಗರ, ಇಕ್ಬಾಲ್ ಹಬೀಬ್ ಸೇಠ್ ಶಿವಮೊಗ್ಗ, ಮುಮ್ತಾಝ್ ಅಲಿ ಕೃಷ್ಣಾಪುರ, ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ರಶೀದ್ SMR,ಅಬ್ದುರ್ರಹ್ಮಾನ್ ನ್ಯಾಷನಲ್, ಇಕ್ಬಾಲ್ ಕಾಜೂರ್, ಅಬ್ದುಲ್ ಹಫೀಲ್ ಸಅದಿ, ಶಾಹಿದ್ ರಝ್ವಿ,ಬಾಬು MCO ಸೇರಿದಂತೆ ಅನೇಕ ಉಲಮಾ ಉಮರ ನಾಯಕರು ಭಾಗವಹಿಸಲಿದ್ದಾರೆ.

Similar News