ಜೆಡಿಎಸ್ ಹೈಕಮಾಂಡ್ ಇರೋದು ಅಡುಗೆ ಮನೆಯಲ್ಲಿ: ಪ್ರಹ್ಲಾದ್ ಜೋಶಿ ವ್ಯಂಗ್ಯ

Update: 2023-02-04 08:23 GMT

ಬೆಂಗಳೂರು: ಜೆಡಿಎಸ್ ನಡೆಸುತ್ತಿರುವ ಯಾತ್ರೆಗೆ ಪಂಚರತ್ನ ಅಂತ ಯಾಕೆ ಹೆಸರು ಇಟ್ಟಿದ್ದಾರೋ ಗೊತ್ತಿಲ್ಲ, ಪಂಚರತ್ನ ಬದಲಾಗಿ ನವಗ್ರಹ ಯಾತ್ರೆ ಎಂದು ಹೆಸರಿಡಬೇಕಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಂಚರತ್ನ ಹೆಸರು ಏಕೆ ಇಟ್ಟಿದ್ದಾರೆ? ಎಂಬ ಬಗ್ಗೆ ಗೊಂದಲ ಆಗಿದೆ‌ ಎಂದರು.

ಇತ್ತೀಚೆಗೆ ದೇವೇಗೌಡರ ಮನೆಯಲ್ಲಿ ಟಿಕೆಟ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಬಳಿಕ ನಮ್ಮ ಹೈಕಮಾಂಡ್ ಇದೆ, ಈ ಬಗ್ಗೆ ಹೈಕಮಾಂಡ್ ಬಗೆಹರಿಸುತ್ತೆ ಎನ್ನುತ್ತಾರೆ. ಅವರ ಹೈಕಮಾಂಡ್ ಎಲ್ಲಿ ಇರುವುದು? ಅವರ ಅಡುಗೆ ಮನೆಯಲ್ಲಾ?, ಕುಟುಂಬದಲ್ಲಿ ಒಟ್ಟಿಗೆ ಇರಲು ಯೋಗ್ಯತೆ ಇಲ್ಲ ಅಂದರೆ, ರಾಜ್ಯ ಉದ್ಧಾರ ಮಾಡ್ತಾರಾ? ಎಂದು ಪ್ರಶ್ನಿಸಿದರು.

Similar News