ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು ರಾಜ್ಯದ ಜನತೆಯ ಕಣ್ಣ ಮುಂದಿವೆ: ಬಿಜೆಪಿ

Update: 2023-02-07 05:14 GMT

ಬೆಂಗಳೂರು: 'ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದಾಗೊಮ್ಮೆ ಕಾಂಗ್ರೆಸ್ ನಾಯಕರು ಆತಂಕಕ್ಕೆ ಒಳಗಾಗುವುದು ನೋಡಿದರೆ ಈಗಲೇ ಕಾಂಗ್ರೆಸ್‌ಗೆ ಸೋಲಿನ ಭೀತಿ ಶುರುವಾಗಿರುವುದು ಸ್ಪಷ್ಟವಾಗಿದೆ' ಎಂದು ಬಿಜೆಪಿ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ@BJP4Karnataka, ''ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು ಏನು ಅನ್ನುವುದು ರಾಜ್ಯದ ಜನತೆಯ ಕಣ್ಣ ಮುಂದಿವೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯದ ಜನತೆ ತೀರ್ಮಾನಿಸಿದ್ದು, ಬಿಜೆಪಿ ಪರ‌ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿದೆ'' ಎಂದು ಹೇಳಿದೆ. 

''ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಏನು ಅಂತ ಈಗಾಗಲೇ ಚುನಾವಣೆಗೆ ಕ್ಷೇತ್ರ ಹುಡುಕಲು ಪರದಾಡುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಮೊದಲು ಚುನಾವಣೆಗೆ ಕ್ಷೇತ್ರ ಹುಡುಕಿಕೊಳ್ಳಿ ನಂತರ ಅಧಿಕಾರದ ಆಸೆ ಬೆಳೆಸಿಕೊಳ್ಳಿ'' ಎಂದು ಬಿಜೆಪಿ ಸಲಹೆ ನೀಡಿದೆ. 

Similar News