ಕಡೂರು | ಕರ್ತವ್ಯ ಲೋಪ: ಪಿಡಿಒ ಅಮಾನತು

Update: 2023-02-07 14:07 GMT

ಚಿಕ್ಕಮಗಳೂರು, ಫೆ.7: ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಅನುಷ್ಠಾನದಲ್ಲಿ ಲೋಪ ಎಸಗಿದ ಆರೋಪದ ಮೇರೆಗೆ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಪಂ ಪಿಡಿಒ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಆದೇಶಿಸಿದ್ದಾರೆ.

ಕೆ.ಬಿ.ಚಂದ್ರಶೇಖರ್ ಅಮಾನತುಗೊಂಡಿರುವ ಗ್ರಾಪಂ ಪಿಡಿಒ ಆಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಎಸ್.ಬಿದರೆ ಗ್ರಾಪಂ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಅಮಾನತುಗೊಂಡಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಅನುಷ್ಠಾನಕ್ಕೆ 2 ಎಕರೆ ಜಮೀನು ಮೀಸಲಿಟ್ಟಿಡಲಾಗಿತ್ತು. ಆದರೆ ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಸುಮಾರು 20 ಲಕ್ಷ ರೂ. ಅನುದಾನ ಸದ್ಬಳಕೆ ಆಗಿರಲಿಲ್ಲ.

ಅನುದಾನ ಸದ್ಬಳಕೆ ಮಾಡಲು ವಿಫಲರಾಗಿರುವ ಆರೋಪ ಸಂಬಂಧ ಇತ್ತೀಚೆಗೆ ಗ್ರಾಪಂ ಸದಸ್ಯರ ದೂರಿನಂತೆ ಕಡೂರು ತಾಪಂ ಇಒ ನೀಡಿದ ವರದಿ ಆಧರಿಸಿ ಜಿಪಂ ಸಿಇಒ ಪಿಡಿಒ ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Similar News