ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಟ್ಯಾಲೆಂಟ್ ಇರಬೇಕು: ಸಚಿವ ಆರ್.ಅಶೋಕ್

Update: 2023-02-08 12:24 GMT

ಬೆಂಗಳೂರು: ನಮ್ಮಲ್ಲಿ ಮುಖ್ಯಮಂತ್ರಿ ಆಗಬೇಕಾದರೆ, ಪ್ರಧಾನ ಮಂತ್ರಿ, ಕೇಂದ್ರ, ರಾಜ್ಯ ಸಚಿವರಾಗಬೇಕಾದರೆ ಟ್ಯಾಲೆಂಟ್​ ಇರಬೇಕು. ಆದರೆ, ಜೆಡಿಎಸ್ ನಲ್ಲಿ ಇದ್ಯಾವುದೂ ಅನ್ವಯಿಸುವುದಿಲ್ಲ, ಅಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಮನೆ ಲೂಟಿ ಮಾಡಬೇಕು ಅಷ್ಟೇ ಎಂದು ಕಂದಾಯ ಸಚಿವ ಆರ್​.ಅಶೋಕ್ ಹೇಳಿದ್ದಾರೆ. 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪ್ರಹ್ಲಾದ್ ಜೋಶಿ ಅವರನ್ನ ಮುಖ್ಯಮಂತ್ರಿ  ಮಾಡುವ ಬಗ್ಗೆ ಕೇಂದ್ರ ನಾಯಕರು ನಿರ್ಧರಿಸುತ್ತಾರೆ. ಈಗಲೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ' ಎಂದು ಸ್ಪಷ್ಟಪಡಿಸಿದರು. 

''ಬೊಮ್ಮಾಯಿ ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಅವರೇ ಹೇಳಿದ್ದಾರೆ. ಸಿಎಂ ಯಾರು ಅನ್ನೋದನ್ನ ತಿರ್ಮಾನ ಮಾಡೋಕೆ ಕೇಂದ್ರದ ನಾಯಕರಿದ್ದಾರೆ'' ಎಂದು ತಿಳಿಸಿದರು. 

''ನಮ್ಮದು ಕುಟುಂಬದ ಪಕ್ಷ ಅಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. ದೇಶದಲ್ಲಿರುವ ಯಾರು ಬೇಕಾದ್ರೂ ಸಿಎಂ, ಪಿಎಂ ಆಗಬಹುದು. ಜೆಡಿಎಸ್​ನಲ್ಲಿ ಸಿಎಂ ಬಗ್ಗೆ ಅವರ ಮನೆಯಲ್ಲೇ ತೀರ್ಮಾನ ಆಗಬೇಕು. ನಮ್ಮದು ಜೆಡಿಎಸ್ ಪಕ್ಷ ಅಲ್ಲ'' ಎಂದು ಟೀಕಿಸಿದರು. 

Similar News