ದಾವಣಗೆರೆ: ಚೂರಿ ಇರಿದು ಯುವಕನ ಕೊಲೆ

Update: 2023-02-12 18:08 GMT

ದಾವಣಗೆರೆ: ಗೋಮಾಳ ಜಮೀನು ವಿಚಾರವಾಗಿ ಜಗಳವಾಗಿ ನಡು ರಸ್ತೆಯಲ್ಲಿಯೇ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾಂಧಿನಗರದ 6 ನೇ ಕ್ರಾಸ್ ನಲ್ಲಿ ರವಿವಾರ ಸಂಜೆ ಪೋಲಿಸ್ ಠಾಣೆ ಸಮೀಪ ನಡೆದಿದೆ. ಮೈಲಾರಿ (28) ಕೊಲೆಯಾದ ಯುವಕ.

ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ನಿವಾಸಿ ಮೈಲಾರಿ.

ಕಿತ್ತೂರು ಗ್ರಾಮದಲ್ಲಿ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಆರು ಎಕರೆ ಗೋಮಾಳ ಜಮೀನು ವಿಚಾರವಾಗಿ ನಮ್ಮ ಪಾಲು ಇದೇ ಎಂದು  ಆರೋಪಿ ಕಳೆದ ಕೆಲ ದಿನಗಳಿಂದ  ಜಗಳ ಮಾಡಿದ್ದರು ಎನ್ನಲಾಗಿದೆ. ಮೈಲಾರಿಯನ್ನು ಹುಡುಕಾಡುತ್ತಿದ್ದ ಆರೋಪಿಗಳು ಗಾಂಧಿ ನಗರದಲ್ಲಿ‌‌ ‌ಯುವಕನನ್ನು ಕಂಡು ಬರುತ್ತಿದ್ದಂತೆ ಮೂವರು ಅರೋಪಿಗಳು ಚಾಕು ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News