ಕೊಪ್ಪಳ: ಸೇತುವೆಗೆ ಢಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ 4 ಮಂದಿ ಮೃತ್ಯು

Update: 2023-02-16 14:08 GMT

ಕೊಪ್ಪಳ, ಫೆ.16: ಇಲ್ಲಿನ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಿಕೊಪ್ಪದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ. 

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಸೇತುವೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. 

ತೆಲಂಗಾಣ ಮೂಲದ ಶಣ್ಮುಖ (28), ವೆನಿಲಾ ವರುದಿನಿ (18) ಹಾಗೂ ಮುಪ್ಪಿದು ರೂಪವತಿ (23) ಎಂಬುವರು ಮೃತಪಟ್ಟವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

'ಮೃತಪಟ್ಟವರೆಲ್ಲರೂ ತೆಲಂಗಾಣ ಮೂಲದವರಾಗಿದ್ದು, ಹೈದರಾಬಾದ್ ನಿಂದ ಗದಗ ಕಡೆಗೆ ಹೋಗುತ್ತಿದ್ದರು. ಮೃತರ ಹೆಚ್ಚಿನ ವಿವರ ಇನ್ನೂ ಸಿಕ್ಕಿಲ್ಲ' ಎಂದು ಕುಕನೂರು ಪಿಎಸ್ ಐ ಅವರು ಮಾಹಿತಿ ನೀಡಿದರು. 

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.

Similar News